ಕದಂಬ ಯುವಕ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪಂದ್ಯಾವಳಿ ಆಯೋಜಿಸಿತ್ತು. ಸಂಘದ ಅಧ್ಯಕ್ಷ ನವೀನ್ ಮಂದಾಲಿ ಮತ್ತು ಸದಸ್ಯರು, ಸ್ಥಳೀಯ ಮುಖಂಡ ಜಿ.ನಟರಾಜ್, ಸರ್ಕಾರಿ ನೌಕರ ಜಿಲ್ಲಾ ಸಂಘದ ಉಪಾಧ್ಯಕ್ಷ ರಾಮಚಂದ್ರಪ್ಪ, ಉಪನ್ಯಾಸಕ ಜಯಪ್ರಕಾಶ್, ದೈಹಿಕ ನಿರ್ದೇಶಕ ತಿಮ್ಮರಾಜು, ಪ್ರಸಾದ್ ಇದ್ದರು.