ಬ್ರಹ್ಮದೇವರ ಕಟ್ಟೆಯ ಬಳಿ ಓವರ್ಬ್ರಿಡ್ಜ್ ನಿರ್ಮಿಸಿ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸುವ ಮತ್ತು ಬಿಳಚೇನಹಳ್ಳಿ ಕೋಟೆ ಪ್ರದೇಶದ ಸಂಪರ್ಕವೇ ಕೆರೆಗೆ ನೀರು ಹರಿದುಬರುವ ಸಂದರ್ಭದಲ್ಲಿ ಕಡಿತಗೊಳ್ಳುತ್ತಿದ್ದು ಅಲ್ಲಿಯೂ ಮೇಲು ರಸ್ತೆ ನಿರ್ಮಿಸಲು ತಾವು ಶ್ರಮಿಸುವುದಾಗಿಯೂ, ಸುಮಾರು ಒಂದೂವರೆಯಿಂದ ಎರಡು ಕೋಟಿ ರೂಗಳ ವೆಚ್ಚದ ಈ ಯೋಜನೆ ಬಗ್ಗೆ ಶಾಸಕರ ಗಮನ ಸೆಳೆದು ಶೀಘ್ರ ಈ ವ್ಯವಸ್ಥೆ ಮಾಡಲು ಯತ್ನಿಸುವುದಾಗಿಯೂ ತಿಳಿಸಿದರು.
ಮುಖ್ಯಮಂತ್ರಿಗಳ ಪ್ರದೇಶಾಭಿವೃದ್ಧಿ ನಿಧಿ ಅಡಿ ಮದಗದಕೆರೆ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸುವ ಬಗ್ಗೆ ಶಾಸಕರ ಗಮನಕ್ಕೆ ತಂದು ಅಭಿವೃದ್ಧಿಗೆ ಯತ್ನಿಸುವುದಾಗಿ ತಿಳಿಸಿದ ಅವರು ವರುಣನ ಕೃಪೆ ಮುಂದೆಯೂ ಹೀಗೇ ಇರಲಿ ರೈತರ ಬಾಳಲ್ಲಿ ಸಂತಸ ತರಲಿ ಎಂದು ಪ್ರಾರ್ಥಿಸುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಮಮತಾ, ಕವಿತಾ, ಅನುಷಾ, ರಮೇಶ್, ವಸಂತ, ಹರಿಪ್ರಸಾದ್, ಚಿಕ್ಕೇನಹಳ್ಳಿ ಹಾಲಪ್ಪ, ಎಂ.ಕೆ.ಗಂಗಾಧರ, ಮಲ್ಲಪ್ಪ, ಭಾರತಿ, ಸುಧಾ ಕಾಂತ, ನೇತ್ರಮ್ಮ, ಮುಕುಂದ ಮುಂತಾದವರು ಇದ್ದರು.