ಧರಣಿ ನಿರತರ ಜತೆ ಮಾತನಾಡಿದ ಪಿಎಸ್ಐ ಮಂಜುನಾಥ್, ‘ಆರೋಪಿಯನ್ನು ಬಂಧಿಸಲು ಪೊಲೀಸರನ್ನು ಕಳಿಸಿದ್ದೇನೆ. ತಕ್ಷಣ ಪ್ರಕರಣ ದಾಖಲು ಮಾಡುತ್ತೇನೆ. ಠಾಣೆಯ ಮುಂದೆ ಧರಣಿ ಸರಿಯಲ್ಲ. ನಿಮ್ಮ ಹಿತ ಕಾಯಲು ನಾವು ಬದ್ಧ’ ಎಂದು ಭರವಸೆ ನೀಡಿದ್ದರಿಂದ, ಠಾಣೆ ಬಳಿ ಪ್ರತಿಭಟನೆ ಕೈಬಿಟ್ಟು ನಗರಸಭೆ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.