<p><strong>ಚಿತ್ರದುರ್ಗ: </strong>ದೇಶದಲ್ಲಿ ಸಾಧು, ಸಂತರ ಮೇಲೆ ಹಲ್ಲೆ ನಡೆಯುತ್ತಿದೆ. ಲವ್ ಜಿಹಾದ್ ಮೂಲಕ ಯುವತಿಯರನ್ನು ವಂಚಿಸಲಾಗುತ್ತಿದೆ. ಇದನ್ನು ಸಹಿಸಲಾಗದು ಎಂದು ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಸಹ ಕಾರ್ಯದರ್ಶಿ, ಅಯೋಧ್ಯೆ ರಾಮ ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.</p>.<p>ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಆಯೋಜಿಸಿದ್ದ ‘ಶೌರ್ಯ ಯಾತ್ರೆ’ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಅನಾವಶ್ಯಕವಾಗಿ ನಾವು ಯಾರ ಮೇಲೆಯೂ ಆಕ್ರಮಣ ಮಾಡುವುದಿಲ್ಲ. ಆದರೆ, ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುವ ಯಾರನ್ನೂ ಬಿಡುವುದಿಲ್ಲ’ ಎಂದು ಎಚ್ಚರಿಸಿದರು.</p>.<p>‘ಉಚ್ಛ, ನೀಚ, ಸ್ಪೃಶ್ಯ, ಅಸ್ಪೃಶ್ಯ ಎನ್ನುವ ಎಲ್ಲ ಭಾವಗಳನ್ನು ತೊರೆದು ಹಿಂದೂ ಸಮಾಜ ಒಂದಾಗಬೇಕು. ಪ್ರತಿ ಹಿಂದೂವಿನ ಉನ್ನತಿ ನನ್ನ ಉನ್ನತಿ ಎಂದು ಭಾವಿಸಬೇಕು. ಹುಟ್ಟಿದ ಜಾತಿಯಿಂದ ಮೇಲು, ಕೀಳು ಎಂದು ಕಾಣುವುದು ಅನ್ಯಾಯ. ಹಾಗೇ ಮಾಡಬಾರದು’ ಎಂದರು.</p>.<p>‘ದೇಶದ ಪ್ರತಿ ಮೂಲೆ ಮೂಲೆಗಳಲ್ಲಿ ಭಗವಾಧ್ವಜ ಹಾರಾಡಬೇಕು. ಭಾರತ ಸಂಪೂರ್ಣ ಕೇಸರಿಮಯವಾಗಬೇಕು. ದೇಶದಲ್ಲಿ ನಡು ರಾತ್ರಿಯಲ್ಲಿ ತರುಣಿಯರು ಆಭರಣದೊಂದಿಗೆ ನಿರಾತಂಕವಾಗಿ ಓಡಾಡುವಂತಾಗಬೇಕು. ಇದು ನಮ್ಮ ಕನಸು’ ಎಂದು ತಿಳಿಸಿದರು.</p>.<p>‘ದೇಶದ ಆಧ್ಯಾತ್ಮದ ಕೇಂದ್ರ ಬಿಂದು ದೇವತೆಗಳು. ಒಂದು ಕೈಯಲ್ಲಿ ಆಶೀರ್ವಾದ ಮಾಡಿದರೆ, ಮತ್ತೊಂದು ಕೈಯಲ್ಲಿ ಶಸ್ತ್ರ ಹಿಡಿದಿದ್ದಾರೆ. ಸಜ್ಜನರಾಗಿ ಬಂದರೆ ಅಪ್ಪಿಕೊಳ್ಳುತ್ತೇವೆ. ದುಷ್ಟತೆ, ಅನ್ಯಾಯ ಮಾಡಿದರೆ ಶಿಕ್ಷೆ ಕೊಡಬೇಕು ಎನ್ನುವುದನ್ನು ದೇವತೆಗಳು ಸಾರಿದ್ದಾರೆ’ ಎಂದರು.</p>.<p>‘ಇಂತಹ ಒಂದು ಸಂಗತಿಯನ್ನು ಹಿಂದೂ ಸಮಾಜ ಮರೆತಿದೆ. ಬದಲಾಗಿ ಕೃಷ್ಣನನ್ನು ಬೆಣ್ಣೆ ಕಳ್ಳ, ಗೋಪಿಕೃಷ್ಣ ಎಂದೆವು. ಶಿವನನ್ನು ಭೋಲೇನಾಥ ಎಂದೆವು. ಹಿಂದೂ ಸಮಾಜದಲ್ಲಿ ಪರಾಕ್ರಮ ಮತ್ತೆ ಜಾಗೃತವಾಗಬೇಕು. ಈ ನಿಟ್ಟಿನಲ್ಲಿ ಶೌರ್ಯ ಯಾತ್ರೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಕಬೀರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ‘ಗೋಮಾತೆ ರಕ್ಷಿಸುವ ನಾಡಿನಲ್ಲಿ ಎಂದೂ ಬರ ಬರುವುದಿಲ್ಲ. ಬಜರಂಗದಳ ಕಾರ್ಯಕರ್ತರು ಕಸಾಯಿಖಾನೆಗೆ ಹೋಗುವ ಸಾಕಷ್ಟು ಗೋವುಗಳನ್ನು ರಕ್ಷಣೆ ಮಾಡಿ ತಂದು ನಮ್ಮ ಗೋಶಾಲೆಗೆ ಬಿಟ್ಟಿದ್ದಾರೆ. ಈ ಕಾರ್ಯ ಸದಾ ಸ್ಮರಣಿಯವಾದುದು’ ಎಂದರು.</p>.<p>ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಕನಕ ವೃತ್ತದಿಂದ ಹಳೆ ಮಾಧ್ಯಮಿಕ ಶಾಲಾ ಆವರಣದವರೆಗೆ ಸಾವಿರಕ್ಕೂ ಹೆಚ್ಚು ಸಮವಸ್ತ್ರಧಾರಿ ಬಜರಂಗದಳ ಕಾರ್ಯಕರ್ತರು ಶೌರ್ಯ ಯಾತ್ರೆ ನಡೆಸಿದರು.</p>.<p>ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಬಿಜೆಪಿ ಮುಖಂಡ ಜಿ.ಎಸ್.ಅನಿತ್, ಬಜರಂಗದಳ ಪ್ರಾಂತ ಸಹ ಸಂಚಾಲಕ ಪ್ರಭಂಜನ್, ವಿಎಚ್ಪಿ ವಿಭಾಗ ಕಾರ್ಯದರ್ಶಿ ಷಡಾಕ್ಷರಪ್ಪ, ಜಿಲ್ಲಾ ಉಪಾಧ್ಯಕ್ಷ ಡಿ.ಎಂ.ಈಶ್ವರಪ್ಪ, ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಬಜರಂಗದಳ<br />ವಿಭಾಗ ಸಹ ಸಂಯೋಜಕ ರಾಜೇಶ್ ಗೌಡ, ಜಿಲ್ಲಾ ಸಂಯೋಜಕ ಸಂದೀಪ್ ಇದ್ದರು.</p>.<p>***</p>.<p>ಹಿಂದೂ ಸಮಾಜಕ್ಕೆ ಉತ್ಸಾಹ ತುಂಬಲು ಶೌರ್ಯ ಯಾತ್ರೆಯನ್ನು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸುತ್ತಿ ದ್ದೇವೆ. ಸ್ವಾತಂತ್ರ್ಯಾ ನಂತರ ವಿಶ್ವ ಹಿಂದೂ ಪರಿಷತ್ ಈ ಹೋರಾಟ ಕೈಗೆತ್ತಿಕೊಂಡಿದೆ.</p>.<p>ಕೆ.ಆರ್.ಸುನೀಲ್, ಬಜರಂಗದಳ ಪ್ರಾಂತ ಸಂಚಾಲಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>ದೇಶದಲ್ಲಿ ಸಾಧು, ಸಂತರ ಮೇಲೆ ಹಲ್ಲೆ ನಡೆಯುತ್ತಿದೆ. ಲವ್ ಜಿಹಾದ್ ಮೂಲಕ ಯುವತಿಯರನ್ನು ವಂಚಿಸಲಾಗುತ್ತಿದೆ. ಇದನ್ನು ಸಹಿಸಲಾಗದು ಎಂದು ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಸಹ ಕಾರ್ಯದರ್ಶಿ, ಅಯೋಧ್ಯೆ ರಾಮ ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.</p>.<p>ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಆಯೋಜಿಸಿದ್ದ ‘ಶೌರ್ಯ ಯಾತ್ರೆ’ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಅನಾವಶ್ಯಕವಾಗಿ ನಾವು ಯಾರ ಮೇಲೆಯೂ ಆಕ್ರಮಣ ಮಾಡುವುದಿಲ್ಲ. ಆದರೆ, ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುವ ಯಾರನ್ನೂ ಬಿಡುವುದಿಲ್ಲ’ ಎಂದು ಎಚ್ಚರಿಸಿದರು.</p>.<p>‘ಉಚ್ಛ, ನೀಚ, ಸ್ಪೃಶ್ಯ, ಅಸ್ಪೃಶ್ಯ ಎನ್ನುವ ಎಲ್ಲ ಭಾವಗಳನ್ನು ತೊರೆದು ಹಿಂದೂ ಸಮಾಜ ಒಂದಾಗಬೇಕು. ಪ್ರತಿ ಹಿಂದೂವಿನ ಉನ್ನತಿ ನನ್ನ ಉನ್ನತಿ ಎಂದು ಭಾವಿಸಬೇಕು. ಹುಟ್ಟಿದ ಜಾತಿಯಿಂದ ಮೇಲು, ಕೀಳು ಎಂದು ಕಾಣುವುದು ಅನ್ಯಾಯ. ಹಾಗೇ ಮಾಡಬಾರದು’ ಎಂದರು.</p>.<p>‘ದೇಶದ ಪ್ರತಿ ಮೂಲೆ ಮೂಲೆಗಳಲ್ಲಿ ಭಗವಾಧ್ವಜ ಹಾರಾಡಬೇಕು. ಭಾರತ ಸಂಪೂರ್ಣ ಕೇಸರಿಮಯವಾಗಬೇಕು. ದೇಶದಲ್ಲಿ ನಡು ರಾತ್ರಿಯಲ್ಲಿ ತರುಣಿಯರು ಆಭರಣದೊಂದಿಗೆ ನಿರಾತಂಕವಾಗಿ ಓಡಾಡುವಂತಾಗಬೇಕು. ಇದು ನಮ್ಮ ಕನಸು’ ಎಂದು ತಿಳಿಸಿದರು.</p>.<p>‘ದೇಶದ ಆಧ್ಯಾತ್ಮದ ಕೇಂದ್ರ ಬಿಂದು ದೇವತೆಗಳು. ಒಂದು ಕೈಯಲ್ಲಿ ಆಶೀರ್ವಾದ ಮಾಡಿದರೆ, ಮತ್ತೊಂದು ಕೈಯಲ್ಲಿ ಶಸ್ತ್ರ ಹಿಡಿದಿದ್ದಾರೆ. ಸಜ್ಜನರಾಗಿ ಬಂದರೆ ಅಪ್ಪಿಕೊಳ್ಳುತ್ತೇವೆ. ದುಷ್ಟತೆ, ಅನ್ಯಾಯ ಮಾಡಿದರೆ ಶಿಕ್ಷೆ ಕೊಡಬೇಕು ಎನ್ನುವುದನ್ನು ದೇವತೆಗಳು ಸಾರಿದ್ದಾರೆ’ ಎಂದರು.</p>.<p>‘ಇಂತಹ ಒಂದು ಸಂಗತಿಯನ್ನು ಹಿಂದೂ ಸಮಾಜ ಮರೆತಿದೆ. ಬದಲಾಗಿ ಕೃಷ್ಣನನ್ನು ಬೆಣ್ಣೆ ಕಳ್ಳ, ಗೋಪಿಕೃಷ್ಣ ಎಂದೆವು. ಶಿವನನ್ನು ಭೋಲೇನಾಥ ಎಂದೆವು. ಹಿಂದೂ ಸಮಾಜದಲ್ಲಿ ಪರಾಕ್ರಮ ಮತ್ತೆ ಜಾಗೃತವಾಗಬೇಕು. ಈ ನಿಟ್ಟಿನಲ್ಲಿ ಶೌರ್ಯ ಯಾತ್ರೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಕಬೀರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ‘ಗೋಮಾತೆ ರಕ್ಷಿಸುವ ನಾಡಿನಲ್ಲಿ ಎಂದೂ ಬರ ಬರುವುದಿಲ್ಲ. ಬಜರಂಗದಳ ಕಾರ್ಯಕರ್ತರು ಕಸಾಯಿಖಾನೆಗೆ ಹೋಗುವ ಸಾಕಷ್ಟು ಗೋವುಗಳನ್ನು ರಕ್ಷಣೆ ಮಾಡಿ ತಂದು ನಮ್ಮ ಗೋಶಾಲೆಗೆ ಬಿಟ್ಟಿದ್ದಾರೆ. ಈ ಕಾರ್ಯ ಸದಾ ಸ್ಮರಣಿಯವಾದುದು’ ಎಂದರು.</p>.<p>ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಕನಕ ವೃತ್ತದಿಂದ ಹಳೆ ಮಾಧ್ಯಮಿಕ ಶಾಲಾ ಆವರಣದವರೆಗೆ ಸಾವಿರಕ್ಕೂ ಹೆಚ್ಚು ಸಮವಸ್ತ್ರಧಾರಿ ಬಜರಂಗದಳ ಕಾರ್ಯಕರ್ತರು ಶೌರ್ಯ ಯಾತ್ರೆ ನಡೆಸಿದರು.</p>.<p>ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಬಿಜೆಪಿ ಮುಖಂಡ ಜಿ.ಎಸ್.ಅನಿತ್, ಬಜರಂಗದಳ ಪ್ರಾಂತ ಸಹ ಸಂಚಾಲಕ ಪ್ರಭಂಜನ್, ವಿಎಚ್ಪಿ ವಿಭಾಗ ಕಾರ್ಯದರ್ಶಿ ಷಡಾಕ್ಷರಪ್ಪ, ಜಿಲ್ಲಾ ಉಪಾಧ್ಯಕ್ಷ ಡಿ.ಎಂ.ಈಶ್ವರಪ್ಪ, ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಬಜರಂಗದಳ<br />ವಿಭಾಗ ಸಹ ಸಂಯೋಜಕ ರಾಜೇಶ್ ಗೌಡ, ಜಿಲ್ಲಾ ಸಂಯೋಜಕ ಸಂದೀಪ್ ಇದ್ದರು.</p>.<p>***</p>.<p>ಹಿಂದೂ ಸಮಾಜಕ್ಕೆ ಉತ್ಸಾಹ ತುಂಬಲು ಶೌರ್ಯ ಯಾತ್ರೆಯನ್ನು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸುತ್ತಿ ದ್ದೇವೆ. ಸ್ವಾತಂತ್ರ್ಯಾ ನಂತರ ವಿಶ್ವ ಹಿಂದೂ ಪರಿಷತ್ ಈ ಹೋರಾಟ ಕೈಗೆತ್ತಿಕೊಂಡಿದೆ.</p>.<p>ಕೆ.ಆರ್.ಸುನೀಲ್, ಬಜರಂಗದಳ ಪ್ರಾಂತ ಸಂಚಾಲಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>