ಮಾರ್ಚ್ 24ರಂದು ರಾತ್ರಿ ನಾಗರಾಜಪ್ಪ ಅವರು ಮನೆಗೆ ಬಂದಾಗ ಪತ್ನಿ ಸಾಕಮ್ಮ ಸರಿಯಾಗಿ ಉಪಚರಿಸಲಿಲ್ಲ ಎಂದು ಜಗಳ ತೆಗೆದರು. ಜಗಳ ವಿಕೋಪಕ್ಕೆ ತಿರುಗಿ ನಾಗರಾಜಪ್ಪ ಅವರು ಸಾಕಮ್ಮ ಅವರ ಕಣ್ಣಿಗೆ ಬಲವಾಗಿ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ಅವರು ಆಯ ತಪ್ಪಿ ಕೆಳಗೆ ಬಿದ್ದಾಗ ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಸಾಕಮ್ಮ ಅವರ ಪುತ್ರ ಪ್ರವೀಣ ಪೊಲೀಸರಿಗೆ ದೂರು ನೀಡಿದ್ದಾರೆ.