<p><strong>ಸಿರಿಗೆರೆ:</strong> ಅದಿರು ಲಾರಿಗಳ ಓಡಾಟ ನಿಲ್ಲಿಸಲು ಹೋರಾಟ ಮಾಡುತ್ತಿದ್ದ ಭೀಮಸಮುದ್ರದ ಜನರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. </p>.<p>ಸಮೀಪದ ಹಿರೇಕಂದವಾಡಿ ಗುಡ್ಡದಲ್ಲಿ ತೆಗೆಯುವ ಗಣಿಗಾರಿಕೆ ಅದಿರು ಸಾಗಿಸಲು ನೂರಾರು ಬೃಹತ್ ಟ್ರಿಪ್ಪರ್ಗಳು ನಿತ್ಯವೂ ವಿ. ಪಾಳ್ಯದ ಮೂಲಕ ಭೀಮಸಮುದ್ರ ಗ್ರಾಮದ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಗಣಿ ದೂಳಿನಿಂದ ಸುತ್ತಲ ಊರುಗಳಲ್ಲೆಲ್ಲಾ ವಾತಾವರಣ ಕಲುಷಿತಗೊಂಡಿತ್ತು. </p>.<p>ಗ್ರಾಮದಲ್ಲಿನ ಮುಖ್ಯ ರಸ್ತೆಯಲ್ಲಿರುವ ಹೋಟೆಲ್ಗಳು, ಬೇಕರಿ ಅಂಗಡಿಗಳ ಆಹಾರದ ಮೇಲೆ ದೂಳಿನ ಅಂಶ ಬೆರೆತು ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಿತ್ತು. ಮಕ್ಕಳು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ಏರ್ಪಟ್ಟಿತ್ತು. </p>.<p>ಲಾರಿಗಳ ಓಡಾಟದ ವೇಳೆ ದ್ವಿಚಕ್ರ ವಾಹನ ಸವಾರರು ಅಪಘಾತಗಳಿಗೆ ಈಡಾಗಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಮೈನಿಂಗ್ ಲಾರಿಗಳ ಓಡಾಟವನ್ನು ನಿರ್ಬಂಧಿಸಬೇಕೆಂದು ಸತತ ಹೋರಾಟ ನಡೆಯಿತು. ಇತ್ತೀಚಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮೈನಿಂಗ್ ಲಾರಿಗಳ ಓಡಾಟ ನಿಲ್ಲಿಸುವಂತೆ ಆಗ್ರಹಿಸಿದ್ದರು. </p>.<p>ಗ್ರಾಮಸ್ಥರ ಆಕ್ರೋಶವನ್ನು ಗಣನೆಗೆ ತೆಗೆದುಕೊಂಡಿರುವ ಅದಿರು ಸಂಸ್ಥೆಗಳು ಅದಿರು ವಲಯದಲ್ಲಿನ ಖಾಸಗಿ ರೈಲ್ವೆ ಟ್ರ್ಯಾಕ್ ಮೂಲಕ ಅದಿರು ಸಾಗಿಸಲು ಮುಂದಾಗಿರುವುದರಿಂದ ಭೀಮಸಮುದ್ರ ಕಳೆದ ಎರಡು ದಿನಗಳಿಂದ ದೂಳಿನಿಂದ ಹೊರಬರುವ ಯತ್ನ ಮಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ:</strong> ಅದಿರು ಲಾರಿಗಳ ಓಡಾಟ ನಿಲ್ಲಿಸಲು ಹೋರಾಟ ಮಾಡುತ್ತಿದ್ದ ಭೀಮಸಮುದ್ರದ ಜನರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. </p>.<p>ಸಮೀಪದ ಹಿರೇಕಂದವಾಡಿ ಗುಡ್ಡದಲ್ಲಿ ತೆಗೆಯುವ ಗಣಿಗಾರಿಕೆ ಅದಿರು ಸಾಗಿಸಲು ನೂರಾರು ಬೃಹತ್ ಟ್ರಿಪ್ಪರ್ಗಳು ನಿತ್ಯವೂ ವಿ. ಪಾಳ್ಯದ ಮೂಲಕ ಭೀಮಸಮುದ್ರ ಗ್ರಾಮದ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಗಣಿ ದೂಳಿನಿಂದ ಸುತ್ತಲ ಊರುಗಳಲ್ಲೆಲ್ಲಾ ವಾತಾವರಣ ಕಲುಷಿತಗೊಂಡಿತ್ತು. </p>.<p>ಗ್ರಾಮದಲ್ಲಿನ ಮುಖ್ಯ ರಸ್ತೆಯಲ್ಲಿರುವ ಹೋಟೆಲ್ಗಳು, ಬೇಕರಿ ಅಂಗಡಿಗಳ ಆಹಾರದ ಮೇಲೆ ದೂಳಿನ ಅಂಶ ಬೆರೆತು ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಿತ್ತು. ಮಕ್ಕಳು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ಏರ್ಪಟ್ಟಿತ್ತು. </p>.<p>ಲಾರಿಗಳ ಓಡಾಟದ ವೇಳೆ ದ್ವಿಚಕ್ರ ವಾಹನ ಸವಾರರು ಅಪಘಾತಗಳಿಗೆ ಈಡಾಗಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಮೈನಿಂಗ್ ಲಾರಿಗಳ ಓಡಾಟವನ್ನು ನಿರ್ಬಂಧಿಸಬೇಕೆಂದು ಸತತ ಹೋರಾಟ ನಡೆಯಿತು. ಇತ್ತೀಚಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮೈನಿಂಗ್ ಲಾರಿಗಳ ಓಡಾಟ ನಿಲ್ಲಿಸುವಂತೆ ಆಗ್ರಹಿಸಿದ್ದರು. </p>.<p>ಗ್ರಾಮಸ್ಥರ ಆಕ್ರೋಶವನ್ನು ಗಣನೆಗೆ ತೆಗೆದುಕೊಂಡಿರುವ ಅದಿರು ಸಂಸ್ಥೆಗಳು ಅದಿರು ವಲಯದಲ್ಲಿನ ಖಾಸಗಿ ರೈಲ್ವೆ ಟ್ರ್ಯಾಕ್ ಮೂಲಕ ಅದಿರು ಸಾಗಿಸಲು ಮುಂದಾಗಿರುವುದರಿಂದ ಭೀಮಸಮುದ್ರ ಕಳೆದ ಎರಡು ದಿನಗಳಿಂದ ದೂಳಿನಿಂದ ಹೊರಬರುವ ಯತ್ನ ಮಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>