ಮುಖ್ಯವಾಗಿ ಹೆದ್ದಾರಿಯಲ್ಲಿನ ನಾಗಸಮುದ್ರ, ರಾಯಪುರ, ಬಿ.ಜಿ.ಕೆರೆ, ಹಿರೇಹಳ್ಳಿ, ತಳಕು ಇಲ್ಲಿ ಕಡ್ಡಾಯವಾಗಿ ಒಳಗಡೆ ಬಂದು ಹೋಗುವಂತೆ ಮಾಡಬೇಕು. ಇಲ್ಲವಾದರೆ ತೊಂದರೆಯಾಗುತ್ತದೆ. ತಾಲ್ಲೂಕಿನ ದೊಡ್ಡ ಗ್ರಾಮವಾಗಿರುವ ನಾಗಸಮುದ್ರ ಮತ್ತು ಸುತ್ತಮುತ್ತಲಿನವರು ಬಸ್ ನಿಲುಗಡೆ ಇಲ್ಲದ ಕಾರಣ ರಾಂಪುರ ಇಲ್ಲವೇ ಹಾನಗಲ್ ಟಿಕೆಟ್ ಪಡೆದು ಪ್ರಯಾಣಿಸಬೇಕಿದೆ.