ಈ ಸ್ಥಳದಲ್ಲಿ ವಾರದಲ್ಲಿ ಮೂರ್ನಾಲ್ಕು ಬಾರಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ವಾಹನ ಚಾಲಕರು ವೇಗವಾಗಿ ವಾಹನಗಳನ್ನು ಚಲಾಯಿಸಿಕೊಂಡು ಬರುತ್ತಿರುತ್ತಾರೆ. ಸಂಜೆ ವೇಳೆಯಲ್ಲಿ ಕೆಲವರು ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸುತ್ತಿರುತ್ತಾರೆ. ಹೀಗಾಗಿ ಮಕ್ಕಳನ್ನು ಮನೆಯ ಮುಂದೆ ಆಟಕ್ಕೆ ಬಿಡಲು ಭಯವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗೆ ಹಂಪ್ಸ್ ಹಾಕಬೇಕು ಎಂದು ನಿವಾಸಿಗಳಾದ ಈಶ್ವರಪ್ಪ, ಮಲ್ಲಯ್ಯ, ಬಿ.ಜಿ. ಜಯ್ಯಪ್ಪ, ಲಕ್ಷ್ಮಿದೇವಿ, ಮಂಜುಳ, ಯಶೋದಮ್ಮ, ಮೀನಾಕ್ಷಮ್ಮ, ಕವಿತಾ ಆಗ್ರಹಿಸಿದ್ದಾರೆ.