ಚಿತ್ರದುರ್ಗ ನಗರಕ್ಕೆ ಸಮೀಪದ ಹೊಸ ಜಿಲ್ಲಾಡಳಿತ ಭವನದ ಎದುರು ರಸ್ತೆ ಕಾಮಗಾರಿ ನಡೆಯುತ್ತಿರುವುದು
ಜಿಲ್ಲಾಡಳಿತ ಭವನಕ್ಕೆ ಕುಡಿಯುವ ನೀರು ಸೇರಿದಂತೆ ಸಕಲ ಮೂಲ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ. ಕಂದಾಯ ಸಚಿವರೂ ಪರಿಶೀಲನೆ ನಡೆಸಿದ್ದು ಶೀಘ್ರ ಕಾಮಗಾರಿ ಮುಗಿಯಲಿದೆ
ಟಿ.ವೆಂಕಟೇಶ್ ಜಿಲ್ಲಾಧಿಕಾರಿ
ಹೊಸ ಜಿಲ್ಲಾಧಿಕಾರಿ ಕಚೇರಿಯನ್ನು ನಗರದಿಂದ 2 ಕಿ.ಮೀ. ದೂರದಲ್ಲಿ ನಿರ್ಮಿಸಿರುವುದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತದೆ. ಅಲ್ಲದೆ ಇದೇ ನೆಪ ಮಾಡಿಕೊಂಡು ಆಟೊದವರು ಹೆಚ್ಚು ಹಣ ವಸೂಲಿ ಮಾಡಲು ಮುಂದಾಗುತ್ತಾರೆ. ಬಡವರಿಗೆ ಆರ್ಥಿಕ ಹೊರೆಯಾಗುತ್ತದೆ
ಜಿ. ನಟರಾಜ್ ಚಿಕ್ಕಜಾಜೂರು ನಿವಾಸಿ
ಜಿಲ್ಲಾಧಿಕಾರಿ ಕಚೇರಿಯ ನೂತನ ಕಟ್ಟಡ ದಶಕದ ಕನಸು. ಈ ಕಟ್ಟಡವನ್ನು ಚಿತ್ರದುರ್ಗ ನಗರದೊಳಗೆ ನಿರ್ಮಿಸಿದ್ದರೆ ತುಂಬಾ ಅನುಕೂಲವಾಗುತ್ತಿತ್ತು. ನಾಯಕನಹಟ್ಟಿ ಹೋಬಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಅಂದಾಜು 45 ಕಿ.ಮೀ. ಕ್ರಮಿಸಬೇಕಿದೆ