‘ಬಿಸಿಲು ಹೆಚ್ಚು ಇರುವುದರಿಂದ ಕೆಲಸಕ್ಕಾಗಿ ಬಂದ ಗ್ರಾಮೀಣ ಜನರು ಶುದ್ಧ ಕುಡಿಯುವ ನೀರಿಗೆ ಪರದಾಡುತ್ತಿರುತ್ತಾರೆ. ಆ ಜನರ ದಾಹ ಹೇಳತೀರದು. ಹೋಟೆಲ್ಗಳಲ್ಲಿ ತಿಂಡಿ, ಟೀ, ಕಾಫಿ ತೆಗೆದುಕೊಂಡರೆ ಮಾತ್ರ ನೀರು ಕೊಡುತ್ತಾರೆ. ಗ್ರಾಮೀಣ ಜನರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಟ್ರಸ್ಟ್ ವತಿಯಿಂದ ಶುದ್ಧ, ತಂಪಾದ ಕುಡಿಯುವ ನೀರನ್ನು ವರ್ಷದಲ್ಲಿ 3ರಿಂದ 4 ತಿಂಗಳು ನಿರಂತರವಾಗಿ ವಿತರಿಸುವ ಸಂಕಲ್ಪವನ್ನು ಮಾಡಿದ್ದೇವೆ’ ಎನ್ನುತ್ತಾರೆ ಗೆಳೆಯರ ಬಳಗದ ಸದಸ್ಯರಾದ ಹರೀಶ್, ವಿಕಾಸ್, ಮಂಜು, ಹರ್ಷ, ಗಿರಿ.