ಸಂಸದ ಎ. ನಾರಾಯಣ ಸ್ವಾಮಿ, ‘ಎಷ್ಟು ಬೇಕಾದರೂ ವ್ಯಾಕ್ಸಿನ್ ತರಿಸಿ ಕೊಡುತ್ತೇವೆ. ಪ್ರತಿ ಮನೆಗೂ ಲಸಿಕೆ ದೊರೆಯಬೇಕು. ರೋಗಿಗಳ ಸಂಖ್ಯೆ ಹೆಚ್ಚಾದರೆ ವಸತಿಶಾಲೆಗಳನ್ನು ಕೋವಿಡ್ ಕೇಂದ್ರಗಳಾಗಿ ಮಾಡಿ. ಮುಂದೆ 3ನೇ ಅಲೆ ಬರುತ್ತಿದ್ದು, ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಮುಂದಿನ ಸವಾಲು ಎದುರಿಸಲು ಈಗಿನಿಂದಲೇ ಸಿದ್ಧರಾಗಬೇಕು. ಆಮ್ಲಜನಕದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲಾ ಕಡೆ ಕೋವಿಡ್ ವಾರ್ ರೂಂ ಆರಂಭವಾಗಿದ್ದು, ಇಲ್ಲಿ ಏಕೆ ಆರಂಭಿಸಿಲ್ಲ’ ಎಂದು ಪ್ರಶ್ನಿಸಿದರು.