ಶನಿವಾರ ಬೆಳಿಗ್ಗೆ ತೋಟಕ್ಕೆ ಹೋಗಿದ್ದ ಸಂಜು ಮನೆಗೆ ವಾಪಸ್ ಬಂದಿರಲಿಲ್ಲ. ಸಂಜು ಅವರು ಕೊಳವೆ ಬಾವಿ ಸ್ಟಾರ್ಟರ್ ಬಾಕ್ಸ್ ಹತ್ತಿರ ಬಿದ್ದಿರುವುದನ್ನು ಪಕ್ಕದ ತೋಟದ ರೈತರೊಬ್ಬರು ನೋಡಿ ಮನೆಯವರಿಗೆ ವಿಷಯ ತಿಳಿಸಿದ್ದರು. ತಕ್ಷಣವೇ ತೋಟಕ್ಕೆ ಬಂದ ಸಂಜು ಸಹೋದರ ಶಿವರಾಜ್ ಕಾರಿನಲ್ಲಿ ಸಂಜು ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಪರೀಕ್ಷಿಸಿ ನೋಡಿ ಸಂಜು ಸಾವನ್ನಪ್ಪಿರುವುದಾಗಿ ತಿಳಿಸಿದರು.