ಭದ್ರಾ ಮೇಲ್ದಂಡೆ, ನೇರ ರೈಲ್ವೆ ಸೇರಿ ವಿವಿಧ ಚಳವಳಿಗಳಲ್ಲಿ ಭಾಗಿಯಾಗಿದ್ದರು. ಗೋಕಾಕ್ ಚಳವಳಿ, ಕೋಟೆಯ ಸಂರಕ್ಷಣೆ, ನೆಲ, ಜಲ, ಭಾಷೆ ಸಂರಕ್ಷಣೆಗೆ ಶ್ರಮಿಸಿದವರು. ಅಮೃತ್ ಮಹಲ್ ಕಾವಲ್ ಉಳಿವಿಗಾಗಿಯೂ ಹೋರಾಟ ಮಾಡಿದ್ದರು. ಚಿತ್ರದುರ್ಗದ ಟೌನ್ ಕೋ ಆಪರೇಟಿವ್ ಸೊಸೈಟಿ ಗೌರವ ಕಾರ್ಯದರ್ಶಿ, ಜಿಲ್ಲಾ ಕಂಬಳಿ ತಯಾರಕ ಮತ್ತು ಮಾರಾಟಗಾರರ ಸಹಕಾರ ಸಂಘದ ಗೌರವ ಕಾರ್ಯದರ್ಶಿ, ಚಿತ್ರದುರ್ಗ–ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಹೋರಾಟ ಸಮಿತಿ ಕಾರ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.