ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎ.ಉಮೇಶ್, ‘ನೀರಿನ ಕೊರತೆಯಿಂದ ತೋಟಗಳು ಒಣಗಿವೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಭರಮಗಿರಿ ಕೆರೆಗೆ ನೀರು ಬರುವುದಿಲ್ಲ ಎಂಬ ಮಾತಿನಿಂದ ರೈತರು ಆತಂಕಗೊಂಡಿದ್ದಾರೆ. ವಾಣಿವಿಲಾಸ ಜಲಾಶಯದಿಂದ ಪೈಪ್ಲೈನ್ ಮೂಲಕ ನೇರವಾಗಿ ನೀರು ಹರಿಸುವ ಯೋಜನೆ ರೂಪಿಸಿ ಕಾರ್ಯಗತಗೊಳಿಸುವಂತೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹಾಗೂ ಸಂಸದ ನಾರಾಯಣಸ್ವಾಮಿಯವರಿಗೆ ಮನವಿ ಸಲ್ಲಿಸೋಣ’ ಎಂದು ಅವರು ಸಲಹೆ ನೀಡಿದರು. ಶ್ರೀಪತಿ ಫಾರಂ ಮಾಲೀಕ ಗೌತಮ್, ಜಯರಾಮಪ್ಪ, ಲೋಕೇಶ್, ಕಾಂತರಾಜ್, ಕಣುಮಪ್ಪ, ಬಿ.ರಾಮಪ್ಪ, ನಾಗೇಂದ್ರಪ್ಪ, ಜಯಣ್ಣ, ಪ್ರಭಾಕರ್, ನಾಗರಾಜ್, ಎಸ್.ಎಸ್.ರಂಗಪ್ಪ ಭಾಗವಹಿಸಿದ್ದರು.