<p><strong>ಹೊಳಲ್ಕೆರೆ: </strong>ಗೊಲ್ಲ ಸಮುದಾಯದ ಜನರು ಮೂಢನಂಬಿಕೆಗಳಿಂದ ಹೊರಬರಬೇಕು ಎಂದು ಕೃಷ್ಣ ಯಾದವಾನಂದ ಸ್ವಾಮೀಜಿ ಕರೆ ನೀಡಿದರು.</p>.<p>ತಾಲ್ಲೂಕಿನ ಅವಳಿ ಹಟ್ಟಿಯಲ್ಲಿ ಮಂಗಳವಾರ ಗೊಲ್ಲ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಗೊಲ್ಲ ಸಮುದಾಯಗಳಲ್ಲಿ ಮುಟ್ಟಾದ ಹಾಗೂ ಬಾಣಂತಿ ಮಹಿಳೆ<br />ಯರನ್ನು ಗ್ರಾಮದಿಂದ ಹೊರಗಿಡುವ ಕೆಟ್ಟ ಸಂಪ್ರದಾಯ ಇದೆ. ಈಚೆಗೆ ಸಮುದಾಯದ ಜನ ಜಾಗೃತರಾಗಿದ್ದು, ಈ ಮೂಢನಂಬಿಕೆಯಿಂದ ಹೊರಬ<br />ರುತ್ತಿದ್ದಾರೆ. ಆದರೆ ಇನ್ನೂ ಕೆಲವು ಸಂಪ್ರದಾಯಸ್ಥ, ಅನಕ್ಷರಸ್ಥ ಕುಟುಂಬ<br />ಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಮುಟ್ಟು ಎನ್ನುವುದು ದೇಹಕ್ಕೆ ಸಂಬಂಧಿಸಿದ ಕ್ರಿಯೆ. ಅದಕ್ಕೂ ದೇವರಿಗೂ ಸಂಬಂಧ ಇಲ್ಲ. ಮುಟ್ಟಾದ ಮಹಿಳೆಯರನ್ನು ಮನೆಯಲ್ಲಿಟ್ಟುಕೊಂಡರೆ ದೇವರು ಶಿಕ್ಷೆ ಕೊಡುವುದಿಲ್ಲ. ಅವನು ಕರುಣಾಮಯಿ. ನಾವೀಗ ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದು, ಕೆಟ್ಟ ಆಚರಣೆಗಳಿಂದ ಹೊರಬರಬೇಕು. ವೈಜ್ಞಾನಿಕ ಅಂಶ<br />ಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.</p>.<p>ಮಾಜಿ ಶಾಸಕ ಎ.ವಿ. ಉಮಾಪತಿ, ‘ಮೂಢನಂಬಿಕೆ ಆಚರಣೆಗೆ ಅನಕ್ಷರತೆಯೂ ಕಾರಣ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣ ಪಡೆದರೆ ಇಂತಹ ಜಾಗೃತಿ ಕಾರ್ಯಕ್ರಮ ನಡೆಸುವ ಅಗತ್ಯ ಇರುವುದಿಲ್ಲ’ ಎಂದರು.</p>.<p>ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಕೆಂಚಮ್ಮ ಅವರನ್ನು ಸನ್ಮಾನಿಸಲಾಯಿತು.</p>.<p>ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕೆ.ಸಿ. ರಮೇಶ್, ನಿವೃತ್ತ ಬಿಇಒ ಡಿ.ಎ. ತಿಮ್ಮಣ್ಣ, ಸಿಡಿಪಿಒ ತಿಪ್ಪಯ್ಯ, ಬಿಸಿಎಂ ಕಲ್ಯಾಣಾಧಿಕಾರಿ ಎಂ. ಪ್ರದೀಪ್ ಕುಮಾರ್, ನಿವೃತ್ತ ಎಂಜಿನಿಯರ್ ಷಣ್ಮುಖಪ್ಪ, ಶಿಕ್ಷಕಿ ಮಂಜುಳಾ, ಮುಖಂಡ ಗೌಡಪ್ಪ, ಸಿ. ರಂಗಸ್ವಾಮಿ, ಎಚ್. ಪದ್ಮಾವತಿ, ಮುರುಗೇಶ್, ಸಚಿನ್,<br />ಪೃಥ್ವಿ, ಗಿರೀಶ್, ಕೆ.ಜಿ. ಕುಸುಮಾ, ಪಿಡಿಒ ಕೃಷ್ಣಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳಲ್ಕೆರೆ: </strong>ಗೊಲ್ಲ ಸಮುದಾಯದ ಜನರು ಮೂಢನಂಬಿಕೆಗಳಿಂದ ಹೊರಬರಬೇಕು ಎಂದು ಕೃಷ್ಣ ಯಾದವಾನಂದ ಸ್ವಾಮೀಜಿ ಕರೆ ನೀಡಿದರು.</p>.<p>ತಾಲ್ಲೂಕಿನ ಅವಳಿ ಹಟ್ಟಿಯಲ್ಲಿ ಮಂಗಳವಾರ ಗೊಲ್ಲ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಗೊಲ್ಲ ಸಮುದಾಯಗಳಲ್ಲಿ ಮುಟ್ಟಾದ ಹಾಗೂ ಬಾಣಂತಿ ಮಹಿಳೆ<br />ಯರನ್ನು ಗ್ರಾಮದಿಂದ ಹೊರಗಿಡುವ ಕೆಟ್ಟ ಸಂಪ್ರದಾಯ ಇದೆ. ಈಚೆಗೆ ಸಮುದಾಯದ ಜನ ಜಾಗೃತರಾಗಿದ್ದು, ಈ ಮೂಢನಂಬಿಕೆಯಿಂದ ಹೊರಬ<br />ರುತ್ತಿದ್ದಾರೆ. ಆದರೆ ಇನ್ನೂ ಕೆಲವು ಸಂಪ್ರದಾಯಸ್ಥ, ಅನಕ್ಷರಸ್ಥ ಕುಟುಂಬ<br />ಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಮುಟ್ಟು ಎನ್ನುವುದು ದೇಹಕ್ಕೆ ಸಂಬಂಧಿಸಿದ ಕ್ರಿಯೆ. ಅದಕ್ಕೂ ದೇವರಿಗೂ ಸಂಬಂಧ ಇಲ್ಲ. ಮುಟ್ಟಾದ ಮಹಿಳೆಯರನ್ನು ಮನೆಯಲ್ಲಿಟ್ಟುಕೊಂಡರೆ ದೇವರು ಶಿಕ್ಷೆ ಕೊಡುವುದಿಲ್ಲ. ಅವನು ಕರುಣಾಮಯಿ. ನಾವೀಗ ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದು, ಕೆಟ್ಟ ಆಚರಣೆಗಳಿಂದ ಹೊರಬರಬೇಕು. ವೈಜ್ಞಾನಿಕ ಅಂಶ<br />ಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.</p>.<p>ಮಾಜಿ ಶಾಸಕ ಎ.ವಿ. ಉಮಾಪತಿ, ‘ಮೂಢನಂಬಿಕೆ ಆಚರಣೆಗೆ ಅನಕ್ಷರತೆಯೂ ಕಾರಣ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣ ಪಡೆದರೆ ಇಂತಹ ಜಾಗೃತಿ ಕಾರ್ಯಕ್ರಮ ನಡೆಸುವ ಅಗತ್ಯ ಇರುವುದಿಲ್ಲ’ ಎಂದರು.</p>.<p>ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಕೆಂಚಮ್ಮ ಅವರನ್ನು ಸನ್ಮಾನಿಸಲಾಯಿತು.</p>.<p>ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕೆ.ಸಿ. ರಮೇಶ್, ನಿವೃತ್ತ ಬಿಇಒ ಡಿ.ಎ. ತಿಮ್ಮಣ್ಣ, ಸಿಡಿಪಿಒ ತಿಪ್ಪಯ್ಯ, ಬಿಸಿಎಂ ಕಲ್ಯಾಣಾಧಿಕಾರಿ ಎಂ. ಪ್ರದೀಪ್ ಕುಮಾರ್, ನಿವೃತ್ತ ಎಂಜಿನಿಯರ್ ಷಣ್ಮುಖಪ್ಪ, ಶಿಕ್ಷಕಿ ಮಂಜುಳಾ, ಮುಖಂಡ ಗೌಡಪ್ಪ, ಸಿ. ರಂಗಸ್ವಾಮಿ, ಎಚ್. ಪದ್ಮಾವತಿ, ಮುರುಗೇಶ್, ಸಚಿನ್,<br />ಪೃಥ್ವಿ, ಗಿರೀಶ್, ಕೆ.ಜಿ. ಕುಸುಮಾ, ಪಿಡಿಒ ಕೃಷ್ಣಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>