<p><strong>ಮೊಳಕಾಲ್ಮುರು:</strong> ‘ಬಯಲುಸೀಮೆ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಸ್ಪಂದಿಸುವ ಮೂಲಕ ನೆರವಿಗೆ ಬರಬೇಕು. ಪ್ರಶಸ್ತಿಗಳ ಮೂಲಕ ರೈತರಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯವಿಲ್ಲ’ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಕೃಷಿಕ ಮಹಿಳೆ ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ ಹೇಳಿದರು.</p>.<p>ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.</p>.<p>ಸರ್ಕಾರದ ಹಲವು ನೀತಿಗಳಿಂದ ಕೃಷಿ ಕ್ಷೇತ್ರ ಸಂಕಷ್ಟಲ್ಲಿದೆ. ಬೆಳೆ ಬೆಳೆಯುವ ಕಾರ್ಯಕ್ಕೆ, ಮಾರಾಟ ವ್ಯವಸ್ಥೆಗೆ ನೆರವು ನೀಡಬೇಕು. ಎಲ್ಲ ಹಂತದಲ್ಲೂ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಅಧ್ಯಯನದ ಮೂಲಕ ಕ್ಷೇತ್ರವನ್ನು ಸುಧಾರಣೆ ಮಾಡಬೇಕು ಎಂದು ಒತ್ತಾಯಿಸಿದರು.</p>.<p>ತಹಶೀಲ್ದಾರ್ ಮಲ್ಲಿಕಾರ್ಜುನ್ ಧ್ವಜಾರೋಹಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಒ.ಮೊರಾರ್ಜಿ ಮಾತನಾಡಿದರು.</p>.<p>ಸಿಪಿಐ ಉಮೇಶ್ ನಾಯಕ, ಬಿಇಒ ಶಿವರಾಜ ನಾಯಕ, ಬಿಆರ್ಸಿ ಹನುಮಂತಪ್ಪ, ಸಿಪಿಐನ ಜಾಫರ್ ಷರೀಫ್, ಕರ್ನಾಟಕ ರಕ್ಷಣಾ ವೇದಿಕೆಯ ಸೂರಮ್ಮನಹಳ್ಳಿ ನಾಗರಾಜ್, ಟಿಎಚ್ಒ ಡಾ.ಸುಧಾ, ತುಮಕೂರ್ಲಹಳ್ಳಿ ಓಬಣ್ಣ, ಮಹೇಶ್, ಎಂ.ಡಿ.ಲತೀಫ್ ಸಾಬ್, ಜಾಖೀರ್ ಹುಸೇನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ‘ಬಯಲುಸೀಮೆ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಸ್ಪಂದಿಸುವ ಮೂಲಕ ನೆರವಿಗೆ ಬರಬೇಕು. ಪ್ರಶಸ್ತಿಗಳ ಮೂಲಕ ರೈತರಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯವಿಲ್ಲ’ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಕೃಷಿಕ ಮಹಿಳೆ ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ ಹೇಳಿದರು.</p>.<p>ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.</p>.<p>ಸರ್ಕಾರದ ಹಲವು ನೀತಿಗಳಿಂದ ಕೃಷಿ ಕ್ಷೇತ್ರ ಸಂಕಷ್ಟಲ್ಲಿದೆ. ಬೆಳೆ ಬೆಳೆಯುವ ಕಾರ್ಯಕ್ಕೆ, ಮಾರಾಟ ವ್ಯವಸ್ಥೆಗೆ ನೆರವು ನೀಡಬೇಕು. ಎಲ್ಲ ಹಂತದಲ್ಲೂ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಅಧ್ಯಯನದ ಮೂಲಕ ಕ್ಷೇತ್ರವನ್ನು ಸುಧಾರಣೆ ಮಾಡಬೇಕು ಎಂದು ಒತ್ತಾಯಿಸಿದರು.</p>.<p>ತಹಶೀಲ್ದಾರ್ ಮಲ್ಲಿಕಾರ್ಜುನ್ ಧ್ವಜಾರೋಹಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಒ.ಮೊರಾರ್ಜಿ ಮಾತನಾಡಿದರು.</p>.<p>ಸಿಪಿಐ ಉಮೇಶ್ ನಾಯಕ, ಬಿಇಒ ಶಿವರಾಜ ನಾಯಕ, ಬಿಆರ್ಸಿ ಹನುಮಂತಪ್ಪ, ಸಿಪಿಐನ ಜಾಫರ್ ಷರೀಫ್, ಕರ್ನಾಟಕ ರಕ್ಷಣಾ ವೇದಿಕೆಯ ಸೂರಮ್ಮನಹಳ್ಳಿ ನಾಗರಾಜ್, ಟಿಎಚ್ಒ ಡಾ.ಸುಧಾ, ತುಮಕೂರ್ಲಹಳ್ಳಿ ಓಬಣ್ಣ, ಮಹೇಶ್, ಎಂ.ಡಿ.ಲತೀಫ್ ಸಾಬ್, ಜಾಖೀರ್ ಹುಸೇನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>