ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಕಲ್ಲು ಮಳೆ: ಬಾಳೆ ತೋಟಕ್ಕೆ ಹಾನಿ

Last Updated 9 ಮೇ 2022, 3:10 IST
ಅಕ್ಷರ ಗಾತ್ರ

ಹಿರಿಯೂರು: ನಗರದ 7 ಕಿ.ಮೀ. ವ್ಯಾಪ್ತಿಯಲ್ಲಿ ಭಾನುವಾರ ಆಲಿಕಲ್ಲು ಮಳೆಯಾಗಿದೆ.

ತಾಲ್ಲೂಕಿನ ಕಸ್ತೂರಿ ರಂಗಪ್ಪನಹಳ್ಳಿಯಲ್ಲಿ ರಾಜಪ್ಪ ಎಂಬುವವರ ಮೂರು ಎಕರೆಯ ಬಾಳೆ ತೋಟಕ್ಕೆ ಹಾನಿಯಾಗಿದ್ದು, ಶೇ 70ರಷ್ಟು ಕಂದುಗಳು ಗಾಳಿಯ ಹೊಡೆತಕ್ಕೆ ನೆಲಕ್ಕೆ ಬಿದ್ದಿವೆ. ಭೀಮನಬಂಡೆ ಸಮೀಪದ ಶಿವಮೂರ್ತಿ ಎಂಬುವವರ ಮಾವಿನ ತೋಟದಲ್ಲಿಸಾವಿರಾರು ಮಾವಿನ ಕಾಯಿಗಳು ನೆಲಕ್ಕೆ ಬಿದ್ದಿವೆ.

ಆಲಿಕಲ್ಲು ಮಳೆಗೆ ಬಾಳೆ, ದಾಳಿಂಬೆ, ಪಪ್ಪಾಯಿ ಅಥವಾ ಮಾವು ಹಾಳಾಗಿದೆ. ಆಲಿಕಲ್ಲು ಬಿದ್ದ ಹಣ್ಣುಗಳನ್ನು ಯಾವ ವರ್ತಕರೂ ಖರೀದಿಸುವುದಿಲ್ಲ ಎಂದು ರೈತ ಶಿವಮೂರ್ತಿ ಅಳಲು ತೋಡಿಕೊಂಡರು.

‘ಈಗ ತಾನೆ ಬಾಳೆ ಗೊನೆ ಹೊಡೆಯಲು ಆರಂಭವಾಗಿತ್ತು. ಸಾವಯವ ಗೊಬ್ಬರ ಹಾಕಿದ್ದರಿಂದ ನಮ್ಮ ನಿರೀಕ್ಷೆಗೂ ಮೀರಿ ಬಾಳೆ ಬೆಳೆದಿತ್ತು. ಒಂದು ಗೊನೆ ಸರಾಸರಿ 30–35 ಕೆಜಿ ತೂಕ ಬರುವ ನಿರೀಕ್ಷೆ ಇತ್ತು. ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಗೆ ಒಳ್ಳೆಯ ದರವಿತ್ತು. ಬಿರುಗಾಳಿ, ಮಳೆಗೆ ಎಲ್ಲ ಹಾನಿಯಾಗಿದೆ’ ಎಂದು ರಾಜಪ್ಪ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT