‘ಭೋವಿ ಜನಾಂಗದ ಅನಾದಿ ಕಾಲದ ಪರಿಶ್ರಮವು ದೇಗುಲ ಹಾಗೂ ಶಾಸನಗಳಲ್ಲಿ ಅಮರವಾಗಿದೆ. ಈ ಜನಾಂಗ ಕಲ್ಲು, ಬಂಡೆ ತೆಗೆಯುವ ಕೌಶಲ ಕಲಿಯದೇ ಇದ್ದಿದ್ದರೆ ಗತಕಾಲದ ವೈಭವ, ಇತಿಹಾಸ, ಸಂಸ್ಕೃತಿಯನ್ನು ಇಂದಿನ ಪೀಳಿಗೆ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಕೆರೆ, ಕಟ್ಟೆ, ಕಾಲುವೆ, ಅಣೆಕಟ್ಟೆ ನಿರ್ಮಾಣದಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದೆ. ಸಮುದಾಯದವರ ಜೀವನ ದುಸ್ತರವಾಗಿದ್ದು, ಕೆಲ ಕಾನೂನು ಬದಲಾವಣೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದಾರೆ.