‘ರಾಜಕಾರಣವೂ ಕ್ರೀಡೆ ಇದ್ದಂತೆ. ಅದರಲ್ಲಿ ಏಳು-ಬೀಳು ಸಹಜ. ಕೆಳಗಿದ್ದವರು ಮೇಲೆ ಬರುತ್ತಾರೆ. ಮೇಲಿದ್ದವರು ಕೆಳಗೆ ಇಳಿಯುತ್ತಾರೆ. ನಾನು ಹೊನ್ನಾಳಿಯ ಹುಲಿ. ಮಣ್ಣಿನ ಹೆಂಟೆಯಲ್ಲ, ಕಲ್ಲು ಬಂಡೆ. ನನಗೆ ಸಾಮರ್ಥ್ಯ, ಶಕ್ತಿ ಎರಡೂ ಇದ್ದು, ಯಾವುದಕ್ಕೂ ಜಗ್ಗುವವನೂ ಅಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಆರು ಮಂದಿ ಶಾಸಕರಿದ್ದು, ಬಿಜೆಪಿ ಭದ್ರ ಕೋಟೆಯನ್ನು ಕಡೆಗಣಿಸಬೇಡಿ ಎಂದು ಹಿರಿಯ ಮುಖಂಡರಲ್ಲಿ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.