ಸಿಟಿ ಕ್ಲಬ್ ಸದಸ್ಯರು ಪೊಲೀಸರ ಮೊರೆ ಹೋಗಿದ್ದುವಿಚಾರಣೆಗೆ ಸಹಕಾರ ನೀಡಲಾಗುವುದು. ಕಾನೂನು ಅಡಿಯಲ್ಲಿ ಕೈಗೊಳ್ಳಬಹುದಾದ ಎಲ್ಲಾ ಕ್ರಮ ಜರುಗಿಸಲಾಗುವುದು
ಬಿ.ಟಿ.ಕುಮಾರಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿ ಆಡಳಿತಾಧಿಕಾರಿ ಸಿಟಿ ಕ್ಲಬ್
ಕ್ಲಬ್ನಲ್ಲಿ ಯಾವುದೇ ತಪ್ಪು ಆಗಿಲ್ಲ ಆ ಬಗ್ಗೆ ಇನ್ನೊಂದು ವರದಿ ಇದೆ. ಅದರ ಆಧಾರದ ಮೇಲೆ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ. ಎಫ್ಐಆರ್ ರದ್ದತಿಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ
ಅಜಿತ್ ಪ್ರಸಾದ್ ಜೈನ್ ಮಾಜಿ ಖಜಾಂಚಿ ಸಿಟಿ ಕ್ಲಬ್
177 ಮಂದಿ ಅನರ್ಹತೆಗೆ ಒತ್ತಾಯ
ಅನಧಿಕೃತವಾಗಿ ಸದಸ್ಯತ್ವ ನೀಡಲಾಗಿರುವ 177 ಮಂದಿಯನ್ನು ಅನರ್ಹಗೊಳಿಸಬೇಕು. ಮೂಲ ಸದಸ್ಯರ ಪಟ್ಟಿ ಬಿಡುಗಡೆ ಮಾಡಿ ಚುನಾವಣೆ ನಡೆಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ಅವ್ಯವಹಾರ ನಡೆಸಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ.