<p><strong>ಮೊಳಕಾಲ್ಮುರು:</strong> ‘ಗ್ರಾಮೀಣ ಜನರ ಜೀವನದಲ್ಲಿ ನೂರಾರು ವರ್ಷಗಳಿಂದ ಹಾಸುಹೊಕ್ಕಾಗಿರುವ ಜಾನಪದ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾಗಿದೆ’ ಎಂದು ಕಲಾವಿದರ ಮಾಸಾಶನ ಸಮಿತಿ ಸದಸ್ಯ ಡಿ.ಒ.ಮೊರಾರ್ಜಿ ಹೇಳಿದರು.</p>.<p>ತಾಲ್ಲೂಕಿನ ಚಿಕ್ಕೇರಹಳ್ಳಿಯಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕೋಬನಹಳ್ಳಿಯ ಮಾಯವತಿ ಮಹಿಳಾ ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಜಾನಪದ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ದೇಶದ ಸಂಸ್ಕೃತಿಗೆ ಜಾನಪದ ಕಲೆಯು ಬುನಾದಿಯಾಗಿದೆ. ಇದು ಶ್ರಮಿಜೀವಿಗಳ ಕಲೆಯಾಗಿದ್ದು, ಕೆಲಸ ಮಾಡುವಾಗಿನ ಶ್ರಮವನ್ನು ಮರೆಸುವ ಶಕ್ತಿಯನ್ನು ಹೊಂದಿದೆ. ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಕಾರ್ಮಿಕರು ಜಾನಪದ ಗೀತೆಗಳನ್ನು ಹಾಡುತ್ತ ಕಾಯಕ ಮಾಡುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ’ ಎಂದರು.</p>.<p>ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ನಾಗಸಮುದ್ರ ಮರಿಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಮಾರಣ್ಣ, ಚಿಕ್ಕನಹಳ್ಳಿ ಅಂಜಿನಪ್ಪ, ಮುಖಂಡ ಭಟ್ರಹಳ್ಳಿ ಧನಂಜಯ, ಚಂದ್ರಣ್ಣ ಹಾಜರಿದ್ದರು. ಸೋಬಾನೆ, ಭಜನೆ, ತತ್ವ ಪದ, ಚೌಡಿಕೆ ಮೇಳ, ತಮಟೆ, ಜನಪದ ನೃತ್ಯ ಕಲಾವಿದರು ಕಲಾ ಪ್ರದರ್ಶನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ‘ಗ್ರಾಮೀಣ ಜನರ ಜೀವನದಲ್ಲಿ ನೂರಾರು ವರ್ಷಗಳಿಂದ ಹಾಸುಹೊಕ್ಕಾಗಿರುವ ಜಾನಪದ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾಗಿದೆ’ ಎಂದು ಕಲಾವಿದರ ಮಾಸಾಶನ ಸಮಿತಿ ಸದಸ್ಯ ಡಿ.ಒ.ಮೊರಾರ್ಜಿ ಹೇಳಿದರು.</p>.<p>ತಾಲ್ಲೂಕಿನ ಚಿಕ್ಕೇರಹಳ್ಳಿಯಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕೋಬನಹಳ್ಳಿಯ ಮಾಯವತಿ ಮಹಿಳಾ ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಜಾನಪದ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ದೇಶದ ಸಂಸ್ಕೃತಿಗೆ ಜಾನಪದ ಕಲೆಯು ಬುನಾದಿಯಾಗಿದೆ. ಇದು ಶ್ರಮಿಜೀವಿಗಳ ಕಲೆಯಾಗಿದ್ದು, ಕೆಲಸ ಮಾಡುವಾಗಿನ ಶ್ರಮವನ್ನು ಮರೆಸುವ ಶಕ್ತಿಯನ್ನು ಹೊಂದಿದೆ. ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಕಾರ್ಮಿಕರು ಜಾನಪದ ಗೀತೆಗಳನ್ನು ಹಾಡುತ್ತ ಕಾಯಕ ಮಾಡುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ’ ಎಂದರು.</p>.<p>ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ನಾಗಸಮುದ್ರ ಮರಿಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಮಾರಣ್ಣ, ಚಿಕ್ಕನಹಳ್ಳಿ ಅಂಜಿನಪ್ಪ, ಮುಖಂಡ ಭಟ್ರಹಳ್ಳಿ ಧನಂಜಯ, ಚಂದ್ರಣ್ಣ ಹಾಜರಿದ್ದರು. ಸೋಬಾನೆ, ಭಜನೆ, ತತ್ವ ಪದ, ಚೌಡಿಕೆ ಮೇಳ, ತಮಟೆ, ಜನಪದ ನೃತ್ಯ ಕಲಾವಿದರು ಕಲಾ ಪ್ರದರ್ಶನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>