ಹೊಸದುರ್ಗ: ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಜ. 7ರಂದು ಬೆಳಿಗ್ಗೆ 10.30ಕ್ಕೆ ‘ಕನಕಮಾರ್ಗ’ ಚಲನಚಿತ್ರ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಚಲನಚಿತ್ರ ವೀಕ್ಷಿಸಬಹುದು ಎಂದು ಕನಕಮಾರ್ಗ ಚಲನಚಿತ್ರ ನಿರ್ದೇಶಕ ವಿಶಾಲ್ ರಾಜ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಲನಚಿತ್ರದಲ್ಲಿ ಶಾಲಾ ವಿದ್ಯಾರ್ಥಿಗಳ ನಟನೆ ಅದ್ಭುತವಾಗಿದೆ. ಕಾಗಿನೆಲೆ ನಿರಂಜನಾನಂದ ಪುರಿ ಸ್ವಾಮೀಜಿ ಸೇರಿ ಹಲವರ ನಟನೆಯನ್ನು ಇಲ್ಲಿ ಕಾಣಬಹುದು. ಚಿತ್ರೀಕರಣ ಕಾಗಿನೆಲೆ, ಬಾಡಾ, ಬೆಂಗಳೂರು ಮತ್ತು ಹಾವೇರಿಗಳಲ್ಲಿ ನಡೆಸಲಾಗಿದೆ. ಭಕ್ತ ಕನಕದಾಸ ಚಿತ್ರಕ್ಕಿಂತ ಇದು ಭಿನ್ನವಾಗಿದೆ’ ಎಂದು ಅವರು ಮಾಹಿತಿ ನೀಡಿದರು.