<p><strong>ಚಿತ್ರದುರ್ಗ:</strong> ‘ಆಧಾರವಿಲ್ಲದ ಇತಿಹಾಸಕ್ಕೆ ಪ್ರಾಮುಖ್ಯತೆಯಿಲ್ಲ. ಆದ್ದರಿಂದ ಆಧಾರ ಸಹಿತ ಇತಿಹಾಸ ಕಟ್ಟುವಲ್ಲಿ ಸಂಶೋಧಕರು, ಇತಿಹಾಸಕಾರರು ಮುಂದಾಗಬೇಕಿದೆ’ ಎಂದು ಉಪನ್ಯಾಸಕ ಲಕ್ಷ್ಮೀಶ್ ಹೆಗಡೆ ಸೋಂದಾ ತಿಳಿಸಿದರು.</p>.<p>ನಗರದ ಐಎಂಎ ಹಾಲ್ನಲ್ಲಿ ಚಿತ್ರದುರ್ಗ ಇತಿಹಾಸ ಕೂಟದಿಂದ ಭಾನುವಾರ ಆಯೋಜಿಸಿದ್ದ 53ನೇ ಉಪನ್ಯಾಸದಲ್ಲಿ ‘ಕದಂಬ-ಚಿತ್ರದುರ್ಗ ಸಂಬಂಧ: ಕೆಲವು ಗ್ರಹಿಕೆಗಳು’ ಕುರಿತು ಮಾತನಾಡಿದ ಅವರು, ‘ಶಾಸನ ರಹಿತ ಸಂಗತಿಗೆ ಪ್ರಾಮುಖ್ಯತೆಯಿಲ್ಲ. ಏಕೆಂದರೆ ಪ್ರಾಥಮಿಕ ಆಧಾರಗಳಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವುದೇ ಶಾಸನ’ ಎಂದರು.</p>.<p>‘ಚಂದ್ರವಳ್ಳಿ ಶಾಸನ ಕುರಿತು ಅಧ್ಯಯನ, ಚರ್ಚೆಗಳು ಆಗಿವೆ ಎಂದರೆ ಅದರಲ್ಲಿ ವಿಶೇಷವಿದೆ ಎಂದರ್ಥ. ಅನೇಕ ರಾಜ ಮನೆತನಗಳು ಕರ್ನಾಟಕದಲ್ಲಿ ಆಳ್ವಿಕೆ ಮಾಡಿವೆ. ಒಲವು-ನಿಲುವು ಒಂದು ಕಡೆಯಾದರೆ ಕದಂಬ ಸಂಬಂಧಿತ ಒಲವು-ನಿಲುವು ವಿಭಿನ್ನವಾಗಿದೆ. ಪ್ರಶ್ನೆ ಮಾಡಿದರೆ ಅನೇಕ ತರ್ಕಗಳು ಏಳುತ್ತವೆ’ ಎಂದು ತಿಳಿಸಿದರು.</p>.<p>‘ಕದಂಬರ ಬಗ್ಗೆ ಅಧ್ಯಯನ ಮಾಡಿದಾಗ 65 ಶಾಸನಗಳು ಸಿಗುತ್ತವೆ. ಸಂಸ್ಕೃತಿಯ ಮೇಲೆ ಒಲವು-ನಿಲುವು ಇಟ್ಟುಕೊಂಡವರು ಕದಂಬರು. ಅವರ ಕಾಲ ಭಾಷಾ ಸಂಕ್ರಮಣದ ಕಾಲವಾಗಿತ್ತು. 65 ಶಾಸನಗಳಲ್ಲಿ 64 ಶಾಸನಗಳ ಸ್ವರೂಪ ಒಂದು ರೀತಿಯಾದರೆ ಚಂದ್ರವಳ್ಳಿಯ ಒಂದು ಶಾಸನ ಮಾತ್ರ ವಿಭಿನ್ನವಾಗಿದೆ’ ಎಂದರು.</p>.<p>‘ಕದಂಬರು, ಮಯೂರ ವರ್ಮನ ಇತಿಹಾಸ ಕುರಿತು ಲಕ್ಷ್ಮೀಶ್ ಹೆಗಡೆ ಸೋಂದಾರವರು 18 ವರ್ಷ ಅಧ್ಯಯನ ನಡೆಸಿದ್ದಾರೆ. ಬನವಾಸಿ ಕದಂಬರ ಬಗ್ಗೆ ಅನೇಕ ಸಂಶೋಧನಾ ಕೃತಿಗಳನ್ನು ರಚಿಸಿರುವ ಇವರದು ವಸ್ತುನಿಷ್ಠ ಅಧ್ಯಯನ’ ಎಂದು ಇತಿಹಾಸ ಕೂಟದ ಸಂಚಾಲಕ ಎನ್.ಎಸ್.ಮಹಂತೇಶ್ ತಿಳಿಸಿದರು.</p>.<p>ಇತಿಹಾಸ ಕೂಟದ ನಿರ್ದೇಶಕ ಲಕ್ಷ್ಮಣ್ ತೆಲಗಾವಿ, ಡಾ.ದೊಡ್ಡಮಲ್ಲಯ್ಯ, ಸುರೇಶ್ ಬಂಡಾರಿ, ಡಿ.ಗೋಪಾಲಸ್ವಾಮಿ ನಾಯಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ‘ಆಧಾರವಿಲ್ಲದ ಇತಿಹಾಸಕ್ಕೆ ಪ್ರಾಮುಖ್ಯತೆಯಿಲ್ಲ. ಆದ್ದರಿಂದ ಆಧಾರ ಸಹಿತ ಇತಿಹಾಸ ಕಟ್ಟುವಲ್ಲಿ ಸಂಶೋಧಕರು, ಇತಿಹಾಸಕಾರರು ಮುಂದಾಗಬೇಕಿದೆ’ ಎಂದು ಉಪನ್ಯಾಸಕ ಲಕ್ಷ್ಮೀಶ್ ಹೆಗಡೆ ಸೋಂದಾ ತಿಳಿಸಿದರು.</p>.<p>ನಗರದ ಐಎಂಎ ಹಾಲ್ನಲ್ಲಿ ಚಿತ್ರದುರ್ಗ ಇತಿಹಾಸ ಕೂಟದಿಂದ ಭಾನುವಾರ ಆಯೋಜಿಸಿದ್ದ 53ನೇ ಉಪನ್ಯಾಸದಲ್ಲಿ ‘ಕದಂಬ-ಚಿತ್ರದುರ್ಗ ಸಂಬಂಧ: ಕೆಲವು ಗ್ರಹಿಕೆಗಳು’ ಕುರಿತು ಮಾತನಾಡಿದ ಅವರು, ‘ಶಾಸನ ರಹಿತ ಸಂಗತಿಗೆ ಪ್ರಾಮುಖ್ಯತೆಯಿಲ್ಲ. ಏಕೆಂದರೆ ಪ್ರಾಥಮಿಕ ಆಧಾರಗಳಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವುದೇ ಶಾಸನ’ ಎಂದರು.</p>.<p>‘ಚಂದ್ರವಳ್ಳಿ ಶಾಸನ ಕುರಿತು ಅಧ್ಯಯನ, ಚರ್ಚೆಗಳು ಆಗಿವೆ ಎಂದರೆ ಅದರಲ್ಲಿ ವಿಶೇಷವಿದೆ ಎಂದರ್ಥ. ಅನೇಕ ರಾಜ ಮನೆತನಗಳು ಕರ್ನಾಟಕದಲ್ಲಿ ಆಳ್ವಿಕೆ ಮಾಡಿವೆ. ಒಲವು-ನಿಲುವು ಒಂದು ಕಡೆಯಾದರೆ ಕದಂಬ ಸಂಬಂಧಿತ ಒಲವು-ನಿಲುವು ವಿಭಿನ್ನವಾಗಿದೆ. ಪ್ರಶ್ನೆ ಮಾಡಿದರೆ ಅನೇಕ ತರ್ಕಗಳು ಏಳುತ್ತವೆ’ ಎಂದು ತಿಳಿಸಿದರು.</p>.<p>‘ಕದಂಬರ ಬಗ್ಗೆ ಅಧ್ಯಯನ ಮಾಡಿದಾಗ 65 ಶಾಸನಗಳು ಸಿಗುತ್ತವೆ. ಸಂಸ್ಕೃತಿಯ ಮೇಲೆ ಒಲವು-ನಿಲುವು ಇಟ್ಟುಕೊಂಡವರು ಕದಂಬರು. ಅವರ ಕಾಲ ಭಾಷಾ ಸಂಕ್ರಮಣದ ಕಾಲವಾಗಿತ್ತು. 65 ಶಾಸನಗಳಲ್ಲಿ 64 ಶಾಸನಗಳ ಸ್ವರೂಪ ಒಂದು ರೀತಿಯಾದರೆ ಚಂದ್ರವಳ್ಳಿಯ ಒಂದು ಶಾಸನ ಮಾತ್ರ ವಿಭಿನ್ನವಾಗಿದೆ’ ಎಂದರು.</p>.<p>‘ಕದಂಬರು, ಮಯೂರ ವರ್ಮನ ಇತಿಹಾಸ ಕುರಿತು ಲಕ್ಷ್ಮೀಶ್ ಹೆಗಡೆ ಸೋಂದಾರವರು 18 ವರ್ಷ ಅಧ್ಯಯನ ನಡೆಸಿದ್ದಾರೆ. ಬನವಾಸಿ ಕದಂಬರ ಬಗ್ಗೆ ಅನೇಕ ಸಂಶೋಧನಾ ಕೃತಿಗಳನ್ನು ರಚಿಸಿರುವ ಇವರದು ವಸ್ತುನಿಷ್ಠ ಅಧ್ಯಯನ’ ಎಂದು ಇತಿಹಾಸ ಕೂಟದ ಸಂಚಾಲಕ ಎನ್.ಎಸ್.ಮಹಂತೇಶ್ ತಿಳಿಸಿದರು.</p>.<p>ಇತಿಹಾಸ ಕೂಟದ ನಿರ್ದೇಶಕ ಲಕ್ಷ್ಮಣ್ ತೆಲಗಾವಿ, ಡಾ.ದೊಡ್ಡಮಲ್ಲಯ್ಯ, ಸುರೇಶ್ ಬಂಡಾರಿ, ಡಿ.ಗೋಪಾಲಸ್ವಾಮಿ ನಾಯಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>