‘ಚಳಮಡು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಚಿರತೆ ಹಿಡಿಯಲು ಬೋನು ಇಟ್ಟಿದ್ದೇವೆ. ನಿತ್ಯ ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಚಳಿಗಾಲದಲ್ಲಿ ಚಿರತೆಗಳು ಆಹಾರ ಹುಡುಕಿ ಬರುವುದು ಎಲ್ಲ ಕಡೆ ಸಾಮಾನ್ಯ. ಅರಣ್ಯದ ಅಂಚಿನಲ್ಲಿ ಇರುವ ಹಳ್ಳಿಗಳಿಗೆ ನುಗ್ಗಿ ಕಟ್ಟಿ ನಾಯಿ, ಕುರಿ, ಮೇಕೆಗಳ ಮೇಲೆ ಅವು ದಾಳಿ ಮಾಡುತ್ತವೆ. ಚಳಿ ಕಡಿಮೆಯಾದ ಮೇಲೆ ಸಹಜವಾಗಿ ಚಿರತೆಗಳು ದಟ್ಟ ಅರಣ್ಯದತ್ತ ಹೋಗುತ್ತವೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು’ ಎಂದು ವಲಯ ಅರಣ್ಯಾಧಿಕಾರಿ ಶ್ರೀಹರ್ಷ ಮನವಿ ಮಾಡಿದ್ದಾರೆ.