ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಮಸಾಗರ | ಕೋತಿಗೆ ಶ್ರದ್ಧಾಂಜಲಿ; ಅನ್ನಸಂತರ್ಪಣೆ

Published 2 ಸೆಪ್ಟೆಂಬರ್ 2023, 19:20 IST
Last Updated 2 ಸೆಪ್ಟೆಂಬರ್ 2023, 19:20 IST
ಅಕ್ಷರ ಗಾತ್ರ

ಭರಮಸಾಗರ (ಚಿತ್ರದುರ್ಗ): ಇಲ್ಲಿನ ನಿವಾಸಿಗಳು ಕೋತಿಯೊಂದರ ಶ್ರದ್ಧಾಂಜಲಿ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಅಂದಾಜು 500 ಮಂದಿಗೆ ಅನ್ನ ಸಂತರ್ಪಣೆ ನಡೆಸಿದ್ದಾರೆ. 

ಶ್ವಾನಗಳ ದಾಳಿಯಿಂದ ಗಾಯಗೊಂಡಿದ್ದ ಹೆಣ್ಣು ಕೋತಿ ಗುರುವಾರ ಮೃತಪಟ್ಟಿತ್ತು. ಅದರ ಅಂತ್ಯಕ್ರಿಯೆ ನೆರವೇರಿಸಿದ್ದ ಸ್ಥಳೀಯರು, ಶನಿವಾರ ಮೂರನೇ ದಿನದ ಧಾರ್ಮಿಕ ವಿಧಿ ವಿಧಾನ ಪೂರೈಸಿ ಶ್ರದ್ಧಾಂಜಲಿ  ಏರ್ಪಡಿಸಿದ್ದರು.  

ದಶಕದ ಹಿಂದೆ ಗ್ರಾಮಕ್ಕೆ ಬಂದಿದ್ದ ಈ ಕೋತಿಯು ಇಲ್ಲಿನ ಹಳೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮಂಜುನಾಥ ಡಾಕ್ಟರ್ ನಿವಾಸದ ಬಳಿ ವಾಸವಿತ್ತು. ನಿವಾಸಿಗಳು ಹಾಗೂ ವರ್ತಕರು ಅದಕ್ಕೆ ನಿತ್ಯವೂ ಹಣ್ಣು, ಊಟ ನೀಡುತ್ತಿದ್ದರು. ಬೇರೆ ಕೋತಿಗಳ ಹಾಗೆ ಇದು ಎಲ್ಲಿಯೂ ಹೋಗುತ್ತಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಅಂಗಡಿಗಳು, ಹೋಟೆಲ್‌ಗಳು ಮುಚ್ಚಿದ್ದರೂ, ಸಾರ್ವಜನಿಕರು ಇದಕ್ಕೆ ಊಟೋಪಚಾರ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT