‘ಆರೇಳು ದಶಕದಿಂದ ಶಿವರಾತ್ರಿ ಸಮಯದಲ್ಲಿ ದೇವರ ದರ್ಶನಕ್ಕೆ ಬರುತ್ತಿದ್ದೇನೆ. ಎಂದೂ ಹಬ್ಬದ ದಿನ ಗರ್ಭ ಗುಡಿಯ ಬಾಗಿಲು ಹಾಕಿರಲಿಲ್ಲ. ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ ಆಗಿದೆ. ಬಾಗಿಲು ಹಾಕಲು ಹೇಳಿದ್ದು ಯಾರು? ಎಂಬ ಪ್ರಶ್ನೆಗೆ ಅಲ್ಲಿ ಯಾರೊಬ್ಬರೂ ಉತ್ತರ ಕೊಡಲಿಲ್ಲ. ಭಕ್ತರ ಸಂಖ್ಯೆ ಹೆಚ್ಚಿದ್ದರೆ ಸ್ವಯಂ ಸೇವಕರು ಅಥವಾ ಪೊಲೀಸರ ಮೂಲಕ ಸಾಲಿನಲ್ಲಿ ನಿಲ್ಲಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕಿತ್ತು’ ಎಂದು ವರ್ತಕ ಆರ್. ಪ್ರಕಾಶ್ ಕುಮಾರ್, ನಿವೃತ್ತ ಶಿಕ್ಷಕ ಓಂಕಾರಪ್ಪ ಬೇಸರ ವ್ಯಕ್ತಪಡಿಸಿದರು.