ಹಾವೇರಿಯ ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ಮದುವೆಗೆ ಹಲವು ರೀತಿಯ ಖರ್ಚುಗಳು ಇರುತ್ತವೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಗೃಹಸ್ಥಾಶ್ರಮಕ್ಕೆ ಭಾರತದಲ್ಲಿ ವಿಶೇಷ ಸ್ಥಾನವಿದೆ. ಸತಿಪತಿಗಳಲ್ಲಿ ಪರಸ್ಪರ ಅವಿನಾಭಾವ ಸಂಬಂಧ ಇರುತ್ತದೆ. ಸಂಸಾರವೆಂಬ ಬಂಡಿ ಸುಗಮವಾಗಿ ಸಾಗಬೇಕು’ ಎಂದು ಹರಸಿದರು.