ನಿಜಲಿಂಗಪ್ಪ ಅವರ ಮನೆ ಪುತ್ರ ಕಿರಣ್ಶಂಕರ್ ಹೆಸರಲ್ಲಿ ಖಾತೆಯಾಗಿದೆ. ಮೊಮ್ಮಗ ವಿನಯ್ ಹೆಸರಿನಲ್ಲಿ ವಿಲ್ ಇದೆ. ಕಾನೂನು ತೊಡಕು ನಿವಾರಿಸಿಕೊಂಡು ಬರುವಂತೆ ಕುಟುಂಬಕ್ಕೆ ಸಲಹೆ ನೀಡಲಾಗಿದೆ. ಆದರೆ, ಅವರು ಸಮಸ್ಯೆ ಬಗೆಹರಿಸಿಕೊಂಡು ಬಂದಿಲ್ಲ. ಈಗಿರುವ ಸ್ಥಿತಿಯಲ್ಲಿ ಮನೆ ಖರೀದಿಸಿ, ಸರ್ಕಾರಕ್ಕೆ ನೋಂದಣಿ ಮಾಡಲು ಉಪನೋಂದಣಾಧಿಕಾರಿ ಒಪ್ಪುತ್ತಿಲ್ಲ.
–ಕವಿತಾ ಎಸ್. ಮನ್ನಿಕೇರಿ, ಜಿಲ್ಲಾಧಿಕಾರಿ