‘ಕಾಮಗಾರಿ ಕೈಗೊಳ್ಳುವ ಮುನ್ನ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅಗೆದ ರಸ್ತೆಗಳನ್ನು ಪುನರ್ ನಿರ್ಮಿಸುವ ಹೊಣೆ ಗುತ್ತಿಗೆದಾರರ ಮೇಲೆ ಇರುತ್ತದೆ. ಇದಕ್ಕೆ ಪ್ರತ್ಯೇಕ ಅನುದಾನ ಕೂಡ ಇರುತ್ತದೆ. ಆದರೆ, ರಸ್ತೆಗಳು ಮಾತ್ರ ಮೊದಲಿನ ಸ್ಥಿತಿಗೆ ಬರುತ್ತಿಲ್ಲ. ಎಚ್ಚರಿಕ ನೀಡಿದರೂ ಗುತ್ತಿಗೆದಾರರು ಧೋರಣೆ ಬದಲಿಸಿಕೊಂಡಿಲ್ಲ’ ಎಂದು ಹರಿಹಾಯ್ದರು.