ಹೊಸದುರ್ಗ ತಾಲ್ಲೂಕಿನ ಕಡದಿನಕೆರೆ ಜಮೀನೊಂದರಲ್ಲಿ ಹಳದಿ ರೋಗಕ್ಕೆ ತುತ್ತಾಗಿರುವ ಸಸಿ ವೀಕ್ಷಿಸುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳು
ಹೊಸದುರ್ಗದ ಜಮೀನೊಂದರಲ್ಲಿ ಹಳದಿ ರೋಗಕ್ಕೆ ತುತ್ತಾಗಿರುವ ಹೆಸರು ಬೆಳೆ ಎಲೆ ಮುದುರಿರುವುದು
ರೋಗ ನಿಯಂತ್ರಣ ಅಸಾಧ್ಯವಾಗಿದೆ. ಇತ್ತೀಚೆಗೆ ಈ ರೋಗ ಹೆಚ್ಚಾಗಿದೆ. ಪ್ರತಿ ಬಾರಿಯೂ 5ರಿಂದ 7 ಕ್ವಿಂಟಲ್ ಹೆಸರು ಪಡೆಯುತ್ತಿದ್ದೆವು. ಈ ಬಾರಿ 3 ಕ್ವಿಂಟಲ್ ಆದರೂ ಸಿಕ್ಕರೆ ಸಾಕು ಎನ್ನುವಂತಾಗಿದೆ.
ಓಂಕಾರ್ ನಾಯ್ಕ ರೈತ ಕಡದಿನಕೆರೆ
ಮೇ ತಿಂಗಳ ಮೊದಲನೇ ವಾರದಲ್ಲಿ ಹೆಸರು ಬಿತ್ತನೆ ಆಗಬೇಕಿತ್ತು. ಮಳೆ ತಡವಾದ ಪರಿಣಾಮ ಹೆಸರು ಬಿತ್ತನೆ ಕಡಿಮೆಯಾಗಿದೆ. ರೈತರಿಗೆ ಸಾವೆ ಬಿತ್ತುವಂತೆ ಸಲಹೆ ನೀಡಿದ್ದೇವೆ. ರೋಗ ನಿಯಂತ್ರಣ ಮಾಹಿತಿಗೆ ಕೃಷಿ ಇಲಾಖೆ ಸಂಪರ್ಕಿಸಬಹುದು.
ಸಿ.ಎಸ್. ಈಶ ಸಹಾಯಕ ಕೃಷಿ ನಿರ್ದೇಶಕ
ರೋಗ ನಿಯಂತ್ರಣಕ್ಕೆ ಸಲಹೆ
ಹೆಸರು ಬಿತ್ತಿದ 40 ದಿನಗಳ ನಂತರದಲ್ಲಿ ಸೋಂಕು ತಗುಲಿದ ಸಸಿಗಳನ್ನು ಕಿತ್ತು ಸುಟ್ಟು ಹಾಕಬೇಕು. ಬೆಳೆ ಪರಿವರ್ತನೆ ಪದ್ಧತಿ ಅಳವಡಿಸಿಕೊಳ್ಳಬೇಕು. ಪ್ರತಿ ಕೆ.ಜಿ. ಬಿತ್ತನೆ ಬೀಜಕ್ಕೆ ಇಮಿಡಾ ಕ್ಲೋಪ್ರಿಡ್ ಶೇ 48ರಷ್ಟು ಎಫ್.ಎಸ್. ಪೀಡೆನಾಶಕವನ್ನು ಬೀಜೋಪಚಾರ ಮಾಡಬೇಕು. ಒಂದು ಲೀಟರ್ ನೀರಿಗೆ ಇಮಿಡಾ ಕ್ಲೋಪ್ರಿಡ್ 17.8 ಎಸ್.ಎಲ್. ಪೀಡೆನಾಶಕವನ್ನು 0.5 ಎಂ.ಎಲ್ನಂತೆ ಸಿಂಪಡಣೆ ಮಾಡುವುದರಿಂದ ರೋಗ ಹತೋಟಿಗೆ ಬರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಮಾಹಿತಿ ನೀಡಿದ್ದಾರೆ.