<p><strong>ನಾಯಕನಹಟ್ಟಿ: </strong>ಮ್ಯಾಸಬೇಡ ಬುಡಕಟ್ಟು ಮತ್ತು ಮ್ಯಾಸಮಂಡಲದ ಸಂಪ್ರದಾಯದಂತೆ ಹೋಬಳಿಯ ಅಬ್ಬೇನಹಳ್ಳಿ ಸಮೀಪ ರಾಮಜ್ಜನ ತೋಟದಲ್ಲಿ ವಡಲೇಶ್ವರಸ್ವಾಮಿ ಮತ್ತು ಅಕ್ಕರಾಯಮ್ಮ ದೇವರ ಉತ್ಸವಗಳು ಮಂಗಳವಾರ ಮತ್ತು ಬುಧವಾರ ಸಂಭ್ರಮದಿಂದ ನಡೆಯಿತು.</p>.<p>ಪುರಾತನ ಸಂಪ್ರದಾಯದ ವಡೆಲ್ದೇವರ ಉತ್ಸವವು ಶೂನ್ಯ ಮಾಸದಲ್ಲಿ ನಡೆಯುತ್ತದೆ. ಸೋಮವಾರದಿಂದ ಉತ್ಸವವು ಆರಂಭವಾಗಿ ಬುಧವಾರ ದೇವರನ್ನು ಗುಡಿತುಂಬಿಸುವುದರೊಂದಿಗೆ ಮುಕ್ತಾಯವಾಯಿತು.</p>.<p>ಹೋಬಳಿಯ ಮಲ್ಲೇಬೋರನಹಟ್ಟಿ ಗ್ರಾಮದಲ್ಲಿರುವ ವಡಲೇಶ್ವರ ದೇವಸ್ಥಾನದಲ್ಲಿರುವ ವಡಲೇಶ್ವರ ಮತ್ತು ಅಕ್ಕರಾಯಮ್ಮ ದೇವರ ಪೆಟ್ಟಿಗೆಗಳನ್ನು ಸಮೀಪದ ಜಿನಿಗಿಹಳ್ಳಕ್ಕೆ ತೆಗೆದುಕೊಂಡು ಹೋಗಿ ಗಂಗಾಪೂಜೆ ಮಾಡಲಾಯಿತು. ನಂತರ ಅಬ್ಬೇನಹಳ್ಳಿ ಬಳಿಯ ರಾಮಜ್ಜನ ತೋಟಕ್ಕೆ ಮೆರವಣಿಗೆಯೊಂದಿಗೆ ತೆರಳಿ ತಂಗಲಾಯಿತು. ಮೊದಲೇ ಕಟ್ಟಿದ್ದ ಸೊಪ್ಪಿನ ಪೌಳಿಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಯಿತು.</p>.<p>ಮಂಗಳವಾರ ಬೆಳಿಗ್ಗೆ ಎಂಟು ಗುಡಿಕಟ್ಟಿಗೆ ಸೇರಿದ ಅಣ್ಣತಮ್ಮಂದಿರು ಸೇರಿ ಕಾಸು ಮೀಸಲು ಅರ್ಪಿಸಿದರು. ನಂತರ ದೇವರಿಗೆ ಹಣ್ಣುಕಾಯಿ ಕೊಟ್ಟು ಪೂಜೆ ಸಲ್ಲಿಸಿದರು. ಮದ್ಯಾಹ್ನ 3 ಗಂಟೆಗೆ ವಡೆಲ್ ದೇವರಿಗೆ ಸೇರಿರುವಂತಹ ದೇವರ ಎತ್ತುಗಳನ್ನು ಪ್ರದಕ್ಷಿಣೆ ಹಾಕಿ ಮೆರಸಲಾಯಿತು. ಭಕ್ತರು ದೇವರ ಎತ್ತುಗಳಿಗೆ ನಮಸ್ಕರಿಸಿ ಪ್ರಸಾದ ಸ್ವೀಕರಿಸಿದರು.</p>.<p>ಎಂಟು ಗುಡಿಕಟ್ಟಿಗೆ (ಹೆಡಿಗೆ) ಸೇರಿದ್ದ ಕೂಡ್ಲಿಗಿ, ಜಗಳೂರು, ಮೊಳಕಾಲ್ಮುರು, ಚಿತ್ರದುರ್ಗ ಸೇರಿ ವಿವಿಧ ತಾಲ್ಲೂಕುಗಳ ಸುಮಾರು 25 ಹಳ್ಳಿಗಳಿಂದ ಬಂದಿದ್ದ ಅಣ್ಣತಮ್ಮಂದಿರು ಭಕ್ತಿಯಿಂದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.</p>.<p>ಮಧ್ಯಾಹ್ನ ಕೋಲಾಟ, ಗೊಂಬೆಕುಣಿತ ಸೇರಿ ವಿವಿಧ ಜಾನಪದ ಕಲಾ ಪ್ರಕಾರಗಳು ಭಕ್ತರ ಗಮನ ಸೆಳೆದವು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಿದ್ದರು. ಸ್ಥಳೀಯ ಜನಪ್ರತಿನಿಧಿಗಳು ಸೇರಿ ವಿವಿಧ ಮುಖಂಡರು ಜಾತ್ರಾ ಮಹೋತ್ಸವದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಯಕನಹಟ್ಟಿ: </strong>ಮ್ಯಾಸಬೇಡ ಬುಡಕಟ್ಟು ಮತ್ತು ಮ್ಯಾಸಮಂಡಲದ ಸಂಪ್ರದಾಯದಂತೆ ಹೋಬಳಿಯ ಅಬ್ಬೇನಹಳ್ಳಿ ಸಮೀಪ ರಾಮಜ್ಜನ ತೋಟದಲ್ಲಿ ವಡಲೇಶ್ವರಸ್ವಾಮಿ ಮತ್ತು ಅಕ್ಕರಾಯಮ್ಮ ದೇವರ ಉತ್ಸವಗಳು ಮಂಗಳವಾರ ಮತ್ತು ಬುಧವಾರ ಸಂಭ್ರಮದಿಂದ ನಡೆಯಿತು.</p>.<p>ಪುರಾತನ ಸಂಪ್ರದಾಯದ ವಡೆಲ್ದೇವರ ಉತ್ಸವವು ಶೂನ್ಯ ಮಾಸದಲ್ಲಿ ನಡೆಯುತ್ತದೆ. ಸೋಮವಾರದಿಂದ ಉತ್ಸವವು ಆರಂಭವಾಗಿ ಬುಧವಾರ ದೇವರನ್ನು ಗುಡಿತುಂಬಿಸುವುದರೊಂದಿಗೆ ಮುಕ್ತಾಯವಾಯಿತು.</p>.<p>ಹೋಬಳಿಯ ಮಲ್ಲೇಬೋರನಹಟ್ಟಿ ಗ್ರಾಮದಲ್ಲಿರುವ ವಡಲೇಶ್ವರ ದೇವಸ್ಥಾನದಲ್ಲಿರುವ ವಡಲೇಶ್ವರ ಮತ್ತು ಅಕ್ಕರಾಯಮ್ಮ ದೇವರ ಪೆಟ್ಟಿಗೆಗಳನ್ನು ಸಮೀಪದ ಜಿನಿಗಿಹಳ್ಳಕ್ಕೆ ತೆಗೆದುಕೊಂಡು ಹೋಗಿ ಗಂಗಾಪೂಜೆ ಮಾಡಲಾಯಿತು. ನಂತರ ಅಬ್ಬೇನಹಳ್ಳಿ ಬಳಿಯ ರಾಮಜ್ಜನ ತೋಟಕ್ಕೆ ಮೆರವಣಿಗೆಯೊಂದಿಗೆ ತೆರಳಿ ತಂಗಲಾಯಿತು. ಮೊದಲೇ ಕಟ್ಟಿದ್ದ ಸೊಪ್ಪಿನ ಪೌಳಿಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಯಿತು.</p>.<p>ಮಂಗಳವಾರ ಬೆಳಿಗ್ಗೆ ಎಂಟು ಗುಡಿಕಟ್ಟಿಗೆ ಸೇರಿದ ಅಣ್ಣತಮ್ಮಂದಿರು ಸೇರಿ ಕಾಸು ಮೀಸಲು ಅರ್ಪಿಸಿದರು. ನಂತರ ದೇವರಿಗೆ ಹಣ್ಣುಕಾಯಿ ಕೊಟ್ಟು ಪೂಜೆ ಸಲ್ಲಿಸಿದರು. ಮದ್ಯಾಹ್ನ 3 ಗಂಟೆಗೆ ವಡೆಲ್ ದೇವರಿಗೆ ಸೇರಿರುವಂತಹ ದೇವರ ಎತ್ತುಗಳನ್ನು ಪ್ರದಕ್ಷಿಣೆ ಹಾಕಿ ಮೆರಸಲಾಯಿತು. ಭಕ್ತರು ದೇವರ ಎತ್ತುಗಳಿಗೆ ನಮಸ್ಕರಿಸಿ ಪ್ರಸಾದ ಸ್ವೀಕರಿಸಿದರು.</p>.<p>ಎಂಟು ಗುಡಿಕಟ್ಟಿಗೆ (ಹೆಡಿಗೆ) ಸೇರಿದ್ದ ಕೂಡ್ಲಿಗಿ, ಜಗಳೂರು, ಮೊಳಕಾಲ್ಮುರು, ಚಿತ್ರದುರ್ಗ ಸೇರಿ ವಿವಿಧ ತಾಲ್ಲೂಕುಗಳ ಸುಮಾರು 25 ಹಳ್ಳಿಗಳಿಂದ ಬಂದಿದ್ದ ಅಣ್ಣತಮ್ಮಂದಿರು ಭಕ್ತಿಯಿಂದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.</p>.<p>ಮಧ್ಯಾಹ್ನ ಕೋಲಾಟ, ಗೊಂಬೆಕುಣಿತ ಸೇರಿ ವಿವಿಧ ಜಾನಪದ ಕಲಾ ಪ್ರಕಾರಗಳು ಭಕ್ತರ ಗಮನ ಸೆಳೆದವು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಿದ್ದರು. ಸ್ಥಳೀಯ ಜನಪ್ರತಿನಿಧಿಗಳು ಸೇರಿ ವಿವಿಧ ಮುಖಂಡರು ಜಾತ್ರಾ ಮಹೋತ್ಸವದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>