‘ಕೊಪ್ಪ ಸಮೀಪ ಇರುವ ಕೇಂದ್ರ ಸಾಂಬಾರು ಮಂಡಳಿಯ ಫಾರಂನಿಂದ 2,500 ಸಸಿ ತಂದು ನೆಡಲಾಗಿದೆ. ಹಾಲಿ ಇರುವ ಅಡಿಕೆ ಹಾಗೂ ಸಿಲ್ವರ ಓಕ್ ಮರದ ಬುಡದಿಂದ ಒಂದೂವರೆ ಅಡಿ ದೂರದಲ್ಲಿ, ತೆಂಗಿನ ಮರದ ಬುಡದಿಂದ ಎರಡೂವರೆ ಅಡಿ ದೂರದಲ್ಲಿ ಒಂದೂವರೆ ಅಡಿ ಆಳ ಮತ್ತು ಸುತ್ತಳತೆಯ ಗುಂಡಿ ತೆಗೆಯಲಾಗಿದೆ. ಅದಕ್ಕೆ ಕೊಟ್ಟಿಗೆ ಗೊಬ್ಬರ ಹಾಗೂ ತರಗೆಲೆಗಳ ಗೊಬ್ಬರ ಹಾಕಿ ಮಣ್ಣಿನಿಂದ ಮುಚ್ಚಿ 15 ದಿನಗಳ ನಂತರ ಕರಿಮೆಣಸಿನ ಸಸಿಯನ್ನು ನೆಡಲಾಗಿದೆ. ಬಳ್ಳಿಯನ್ನು ಅಡಿಕೆ ಮರಕ್ಕೆ ಹಬ್ಬುವಂತೆ ಬಿಡಬೇಕು. ತೆಂಗಿನ ಮರಕ್ಕೆ ಹಬ್ಬಿಸುವುದರಿಂದ ಅಳಿಲು ಕಾಟವೂ ಇರುವುದಿಲ್ಲ. ಪ್ರತಿ ವರ್ಷ ಜನವರಿ- ಫೆಬ್ರುವರಿ ತಿಂಗಳಲ್ಲಿ ತೆನೆ ಕಟಾವು ಮಾಡಲಾಗುತ್ತದೆ. ಮನೆಯಲ್ಲಿರುವ ಯಂತ್ರದ ಮೂಲಕ ತೆನೆಯಿಂದ ಕಾಳು ಬೇರ್ಪಡಿಸಿ ಕಾಳನ್ನು ಬಿಸಿ ನೀರಿನಲ್ಲಿ ಒಂದು ಬಾರಿ ಅದ್ದಿ ತೆಗೆದು ಎರಡು ದಿನ ಬಿಸಿಲಿನಲ್ಲಿ ಒಣಗಿಸಿಟ್ಟರೆ ಸಾಕು ಮಾರುಕಟ್ಟೆಗೆ ಕೊಂಡೊಯ್ಯಬಹುದು’ ಎನ್ನುತ್ತಾರೆ ರೈತ ಮುದ್ದಪ್ಪ.