‘ಬಸವೇಶ್ವರರು ಸಮಾಜ, ಸಂಸ್ಕೃತಿ ಅಥವಾ ರಾಜಕೀಯ ಅಂಶಗಳನ್ನು ಪ್ರಭಾವಿಸಿದ್ದಾರೆ. ಅವರು ಅನುಭವ ಮಂಟಪದ ಮೂಲಕ ಜನರನ್ನು ಒಗ್ಗೂಡಿಸುವುದಕ್ಕೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದಕ್ಕೆ, ಮಹಿಳೆಯರು ಮತ್ತು ಸಮಾಜದ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಒತ್ತು ನೀಡಿದರು. ಅವರ ಉದಾತ್ತ ಬೋಧನೆಗಳು ಲಕ್ಷಾಂತರ ಜನರನ್ನು ತಲುಪಿವೆ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಯತ್ನಗಳಿಂದಾಗಿ ಈ ವಚನಗಳು ಈಗ ನೃತ್ಯದಂತಹ ವಿಭಿನ್ನ ಅಭಿವ್ಯಕ್ತಿ ಕಲೆಯ ಮೂಲಕ ಜನರನ್ನು ತಲುಪುತ್ತಿರುವುದು ವಿಶೇಷ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.