ಚಿತ್ರದುರ್ಗ:ವಿಶ್ವ ಔಷಧ ತಜ್ಞರ ದಿನದ ಅಂಗವಾಗಿ ಬಸವೇಶ್ವರ ಆಸ್ಪತ್ರೆಯಲ್ಲಿಮಂಗಳವಾರಶಿವಮೂರ್ತಿ ಮುರುಘಾ ಶರಣರು ‘ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ’ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನೂತನವಾಗಿ ತೆರೆಯಲಾದ ಈ ಕೇಂದ್ರವೂ ಉಪಯುಕ್ತವಾಗಲಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಇದಕ್ಕೂ ಮುನ್ನ ಎಸ್ಜೆಎಂ ಔಷಧ ಮಹಾವಿದ್ಯಾಲಯದಿಂದ ಜೆಎಂಐಟಿ ಕಾಲೇಜು ಆವರಣದಲ್ಲಿ ಔಷಧ ವನ ಉದ್ಘಾಟನೆ, ಜನೌಷಧ ಕೇಂದ್ರದ ಕುರಿತು ಬೀದಿ ನಾಟಕ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿಯೂ ಕೂಡ ಶರಣರು ಪಾಲ್ಗೊಂಡಿದ್ದರು.
ಔಷಧಗಳ ಉಪಯೋಗ ಕುರಿತು ಕೋಡಯ್ಯನ ಹಟ್ಟಿಯವರೆಗೂ ಜಾಗೃತಿ ಜಾಥಾ ಸಂಚರಿಸಿತು. ಈ ಸಂದರ್ಭದಲ್ಲಿ ವಿವಿಧ ರೋಗಗಳ ಹಾಗೂ ಅವುಗಳನ್ನು ಗುಣಪಡಿಸುವ ವಿಧಾನಗಳ ಬಗ್ಗೆ ಅರಿವು ಮೂಡಿಸಲು ಮುಂದಾಯಿತು. ವಿದ್ಯಾಲಯದ ನೂರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ. ಮಾರುತಿ ಏಕ್ಬೊಟಿ ಮಾತನಾಡಿ, ಸುಮಾರು 50 ಕ್ಕೂ ಅಧಿಕ ಔಷಧೀಯ ಗುಣಗಳಿರುವ ಔಷಧ ವನದಿಂದ ಇದರ ಬಗ್ಗೆ ಆಸಕ್ತಿ ಇರುವಂಥ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಔಷಧ ನಿಯಂತ್ರಣ ಇಲಾಖೆಯ ಪ್ರಭಾರೆ ಆರ್ಎಡಿಸಿಪರುಶುರಾಮ್, ಔಷಧ ಸಂಘದ ಅಧ್ಯಕ್ಷ ಓಂಕಾರಮೂರ್ತಿ, ರೆಡ್ಕ್ರಾಸ್ ಸೊಸೈಟಿಯ ಅಧ್ಯಕ್ಷ ವೈ.ಬಿ.ಮಹೇಂದ್ರನಾಥ್, ಪ್ರಾಚಾರ್ಯೆ ಡಾ.ಡಿ.ಆರ್.ಭಾರತಿ, ಎಸ್ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ. ಡಾ. ಚಿತ್ರಶೇಖರ್ ಇದ್ದರು.