‘ಸಾರಿಗೆ ನೌಕರರ ಮುಷ್ಕರ ಸಮಾಜದ ಮೇಲೆ ಪರಿಣಾಮ ಬೀರಿದೆ. ಬಸ್ ವ್ಯವಸ್ಥೆಯನ್ನು ನಂಬಿದ್ದ ರೈತರು, ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ತರಕಾರಿ, ಹಾಲು, ಹೂ, ಹಣ್ಣು ಸೇರಿ ಇತರ ಉತ್ಪನ್ನಗಳನ್ನು ಸಾಗಿಸಲು ರೈತರಿಗೆ ತೊಂದರೆಯಾಗಿದೆ. ಈ ಸತ್ಯವನ್ನು ಅರಿತು ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಆಗ್ರಹಿಸಿದರು.