ಮದ್ಯ ಖರೀದಿಗೆ ಆಂಧ್ರಪ್ರದೇಶದ ಜನರು ಗಡಿಗೆ ಬರುತ್ತಿದ್ದಾರೆ. ಮದ್ಯದಂಗಡಿಯ ಎದುರು ಜನಜಂಗುಳಿ ನಿರ್ಮಾಣವಾಗುತ್ತಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹೆಚ್ಚು ಜನರು ಸೇರುವುದು ಅಪಾಯ. ಕೊರೊನಾ ಸೋಂಕು ಹರಡಿ ಸಮಸ್ಯೆ ಉಂಟಾಗುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಎಲ್ಲ ಮದ್ಯದಂಗಡಿ ತೆರವುಗೊಳಿಸಬೇಕು ಹಾಗೂ ಹೊಸ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.