‘ಕೆರೆಯ ದೊಡ್ಡಹಳ್ಳದ ಮೇಲೆ ಭದ್ರಾ ಮೇಲ್ದಂಡೆ ಯೋಜನೆಯ ಚಾನಲ್ ಹಾದು ಹೋಗಿದೆ. ಚಾನಲ್ ಕಾಮಗಾರಿಗೆ ಹೋಗುವ ಲಾರಿ, ಟಿಪ್ಪರ್, ಜೆಸಿಬಿಗಳು ಈ ಕೆರೆಯ ಏರಿಯನ್ನು ಎತ್ತರ ಹಾಗೂ ಅಗಲ ಮಾಡಿಕೊಂಡು ಸಂಚರಿಸುತ್ತಿದ್ದವು. ಈಗ
ಸರ್ವೀಸ್ ರಸ್ತೆ ಮಾಡಿಕೊಂಡಿ ರುವುದರಿಂದ ಏರಿ ಮೇಲೆ ಓಡಾಡುತ್ತಿಲ್ಲ. ಇದರಿಂದ ಏರಿ ದುರಸ್ತಿ ಮಾಡಿಸುವ ಗೋಜಿಗೆ ಯಾರೂ ಹೋಗಿಲ್ಲ’ ಎನ್ನುತ್ತಾರೆ ಗ್ರಾಮದ ಮುಖಂಡ ಡಿ.ಮಲ್ಲೇಶ್.