<p><strong>ಚಿಕ್ಕಜಾಜೂರು</strong>: ರಾಮನವಮಿ ಅಂಗವಾಗಿ ಭಾನುವಾರ ಗ್ರಾಮದಲ್ಲಿ ಆಂಜನೇಯಸ್ವಾಮಿ ಹಾಗೂ ರಾಮಕೃಷ್ಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.</p>.<p>ಗ್ರಾಮದ ರಾಮಕೃಷ್ಣ ದೇವಾಲಯದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು.</p>.<p><strong>ಪಲ್ಲಕ್ಕಿ ಉತ್ಸವ:</strong></p>.<p>ರಾಮನವಮಿ ಅಂಗವಾಗಿ ಗ್ರಾಮದ ಕಾಂಗ್ರೆಸ್ ಸಿದ್ದಪ್ಪ ವಂಶಸ್ಥರಿಂದ ಆಂಜನೇಯ, ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಕೋಟೆಹಾಳ್ ಆಂಜನೇಯ ಸ್ವಾಮಿ ಉತ್ಸವಮೂರ್ತಿಗಳಿಗೆ ಕೊನೆ ಹಸೆ ಪೂಜೆ ನಡೆಸಲಾಯಿತು. ಹೂವಿನಿಂದ ಅಲಂಕಾರ ಮಾಡಿದ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. </p>.<p>ಸಂಜೆ ಉತ್ಸವ ಮೂರ್ತಿಗಳನ್ನು ದೇವಸ್ಥಾನಕ್ಕೆ ಕರೆ ತಂದ ನಂತರ ಉಚ್ಛಾಯ ನಡೆಯಿತು. ಸಣ್ಣ ರಥಕ್ಕೆ ದೊಡ್ಡೆಡೆ ಸೇವೆ ಸಲ್ಲಿಸಿ, ಮಹಾ ಮಂಗಳಾರತಿಯ ನಂತರ, ನೆರೆದಿದ್ದ ನೂರಾರು ಭಕ್ತರು ಬ್ರಹ್ಮರಥ ಎಳೆದರು. </p>.<p>ರಥೋತ್ಸವ ಇಂದು: ಸೋಮವಾರ ಮುಂಜಾನೆ 5.30 ಕ್ಕೆ ಆಂಜನೇಯಸ್ವಾಮಿಯ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮುಳ್ಳು ಪಲ್ಲಕ್ಕಿ ಹಾಗೂ ಎದುರುಗತ್ತಿ ಪವಾಡಗಳು ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಜಾಜೂರು</strong>: ರಾಮನವಮಿ ಅಂಗವಾಗಿ ಭಾನುವಾರ ಗ್ರಾಮದಲ್ಲಿ ಆಂಜನೇಯಸ್ವಾಮಿ ಹಾಗೂ ರಾಮಕೃಷ್ಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.</p>.<p>ಗ್ರಾಮದ ರಾಮಕೃಷ್ಣ ದೇವಾಲಯದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು.</p>.<p><strong>ಪಲ್ಲಕ್ಕಿ ಉತ್ಸವ:</strong></p>.<p>ರಾಮನವಮಿ ಅಂಗವಾಗಿ ಗ್ರಾಮದ ಕಾಂಗ್ರೆಸ್ ಸಿದ್ದಪ್ಪ ವಂಶಸ್ಥರಿಂದ ಆಂಜನೇಯ, ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಕೋಟೆಹಾಳ್ ಆಂಜನೇಯ ಸ್ವಾಮಿ ಉತ್ಸವಮೂರ್ತಿಗಳಿಗೆ ಕೊನೆ ಹಸೆ ಪೂಜೆ ನಡೆಸಲಾಯಿತು. ಹೂವಿನಿಂದ ಅಲಂಕಾರ ಮಾಡಿದ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. </p>.<p>ಸಂಜೆ ಉತ್ಸವ ಮೂರ್ತಿಗಳನ್ನು ದೇವಸ್ಥಾನಕ್ಕೆ ಕರೆ ತಂದ ನಂತರ ಉಚ್ಛಾಯ ನಡೆಯಿತು. ಸಣ್ಣ ರಥಕ್ಕೆ ದೊಡ್ಡೆಡೆ ಸೇವೆ ಸಲ್ಲಿಸಿ, ಮಹಾ ಮಂಗಳಾರತಿಯ ನಂತರ, ನೆರೆದಿದ್ದ ನೂರಾರು ಭಕ್ತರು ಬ್ರಹ್ಮರಥ ಎಳೆದರು. </p>.<p>ರಥೋತ್ಸವ ಇಂದು: ಸೋಮವಾರ ಮುಂಜಾನೆ 5.30 ಕ್ಕೆ ಆಂಜನೇಯಸ್ವಾಮಿಯ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮುಳ್ಳು ಪಲ್ಲಕ್ಕಿ ಹಾಗೂ ಎದುರುಗತ್ತಿ ಪವಾಡಗಳು ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>