ಭರಮಸಾಗರ, ಬೊಮ್ಮಸಮುದ್ರ, ದೊಡ್ಡೇರಿ, ಡಿ.ಉಪ್ಪಾರಹಟ್ಟಿ, ದೇವರ ಮರಿಕುಂಟೆ, ಕಸ್ತೂರಿತಿಮ್ಮನಹಳ್ಳಿ, ಚನ್ನಮ್ಮನಾಗತಿಹಳ್ಳಿ, ಕಾಲುವೆಹಳ್ಳಿ, ಕ್ಯಾತಗೊಂಡನಹಳ್ಳಿ, ಕರಿಕೆರೆ, ಯಾದಲಗಟ್ಟೆ, ಜಾಜೂರು, ದೊಡ್ಡ ಉಳ್ಳಾರ್ತಿ, ದುರ್ಗವರ, ವಿಡಪನಕುಂಟೆ ಸೇರಿ ಕೆರೆಯ ಅಕ್ಕಪಕ್ಕದ 60ಕ್ಕೂ ಹೆಚ್ಚು ಗ್ರಾಮದ ಕೊಳವೆಬಾವಿಗಳಲ್ಲಿ ಅಂರ್ತಜಲ ವೃದ್ಧಿಯಾಗಿದೆ. ಇದರಿಂದ ಕೆರೆ ತಟದ ಪ್ರದೇಶದಲ್ಲಿ ನೀರಾವರಿ ಕೃಷಿ ಚಟವಟಿಕೆಗೆ ಮರು ಜೀವ ಬಂದಂತಾಗಿದೆ.