ಹಿರಿಯೂರು:‘ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು–ನೌಕರರು, ಸಾರ್ವಜನಿಕರು ತಿಂಗಳಲ್ಲಿ ಒಂದು ದಿನವಾದರೂ ತಮ್ಮಲ್ಲಿರುವ ವಾಹನವನ್ನು ಬಿಟ್ಟು ನಡೆದು ಹೋದಲ್ಲಿ ಆರೋಗ್ಯ ಸುಧಾರಣೆ ಜತೆಗೆ ಇಂಧನ ಉಳಿತಾಯ, ಪರಿಸರ ಸಂರಕ್ಷಣೆಗೆ ಸಣ್ಣ ಕೊಡುಗೆ ಕೊಟ್ಟಂತಾಗುತ್ತದೆ’ ಎಂದು ಪ್ರಾಂಶುಪಾಲ ಪ್ರೊ. ಡಿ.ಚಂದ್ರಶೇಖರಪ್ಪ ಮನವಿ ಮಾಡಿದರು.