ಮಠದ ಸಿದ್ದರಾಮಯ್ಯ ಕಲಿತಿದ್ದ ಆಯುರ್ವೇದ ವಿದ್ಯೆಯಿಂದ ಪ್ರತಿಫಲಾಪೇಕ್ಷೆ ಇಲ್ಲದೇ ಅನೇಕ ಜನರಿಗೆ, ಜಾನುವಾರುಗಳಿಗೆ ಔಷಧೋಪಚಾರ ಮಾಡುವ ಮೂಲಕ ರೋಗ ಗುಣಪಡಿಸುವ ಸೇವೆ ಸಲ್ಲಿಸಿದ್ದರು. ಸಂಪೂರ್ಣ ಕಲ್ಲಿನಿಂದ ನಿರ್ಮಾಣ ಮಾಡಿದ್ದ ಈ ಕಲ್ಯಾಣಿ ನೀರನ್ನು ಆಗಿನ ಜನರು ಕುಡಿಯುವ ನೀರು, ಜಾನುವಾರು ಸಾಕಾಣಿಕೆ ಹಾಗೂ ದೇವರ ಪೂಜೆಗಾಗಿ ಬಳಸುತ್ತಿದ್ದರು. ಆಗ ವರ್ಷವಿಡೀ ಈ ಕಲ್ಯಾಣಿಯ ತುಂಬಾ ನೀರು ಇರುತ್ತಿದ್ದುದು ವಿಶೇಷವಾಗಿತ್ತು. ಇಲ್ಲಿ ಸುಂದರವಾದ ಬಿಲ್ವವನವಿತ್ತು. ಆದರೆ, ನಿರ್ವಹಣೆಯ ಕೊರತೆ ಯಿಂದಾಗಿ ಹೂಳು ತುಂಬಿಕೊಂಡು ಈ ಪುಣ್ಯಕ್ಷೇತ್ರದಲ್ಲಿದ್ದ ಕಲ್ಯಾಣಿಯು ಬಹು ತೇಕ ಮುಚ್ಚಿ ಹೋಗಿತ್ತು’ ಎನ್ನುತ್ತಾರೆ ಹಿರಿಯ ನಾಗರಿಕ ಬಸವರಾಜಪ್ಪ.