ದೇವಾಲಯದ ಗುರುಸ್ವಾಮಿ ಸದಾನಂದಸ್ವಾಮಿ, ‘ಶಬರಿಮಲೆ ಅಯ್ಯಪ್ಪಸ್ವಾಮಿಗೆ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರಿದ್ದು, ತನ್ನದೇ ಆದಂತಹ ನೀತಿ–ನಿಯಮ–ಪಾವಿತ್ರ್ಯ ಇದೆ. ಅಲ್ಲಿ ನೆಲೆಸಿರುವ ಸ್ವಾಮಿ ಯೋಗಭಂಗಿಯಲ್ಲಿದ್ದು, ಬ್ರಹ್ಮಚಾರಿಯಾಗಿರುವ ಕಾರಣ 10 ವರ್ಷ ಮೇಲ್ಪಟ್ಟು 50 ವರ್ಷ ಒಳಗಿನ ಸ್ತ್ರೀಯರಿಗೆ ಪ್ರವೇಶ ಇರಲಿಲ್ಲ. ಉಳಿದ ವಯೋಮಾನದವರು ಮುಕ್ತವಾಗಿ ದೇವರ ದರ್ಶನ ಮಾಡಬಹುದಿತ್ತು. ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬೇಕೆಂಬ ಉದ್ದೇಶದಿಂದ ಜ. 2 ರಂದು ಭಕ್ತಿಯೇ ಇಲ್ಲದ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮೂಲಕ ಭಕ್ತರ ಭಾವನೆಗಳಿಗೆ ಘಾಸಿ ಉಂಟು ಮಾಡಲಾಗಿದೆ’ ಎಂದು ಆರೋಪಿಸಿದರು.