‘ತಾಲ್ಲೂಕಿನ ಮರಳಿಗೆ ಬೆಂಗಳೂರಿನಲ್ಲಿ ತುಂಬಾ ಬೇಡಿಕೆ ಇದ್ದು, ದೊಡ್ಡ ದೊಡ್ಡ ಟಿಪ್ಪರ್ಗಳಲ್ಲಿ ಮರಳು ಸಾಗಿಸುತ್ತಿರುವ ಕಾರಣ ಕೆಲವೇ ದಿನಗಳಲ್ಲಿ ಎರಡೂ ನದಿಗಳು ಖಾಲಿಯಾಗಲಿವೆ. ಅಧಿಕಾರಿಗಳು ಆಗಾಗ ಹೂವಿನಹೊಳೆ, ಬಿದರಕೆರೆ, ಹೊಸಹಳ್ಳಿ, ಸಾಲುಹುಣಿಸೆ ಗ್ರಾಮಗಳ ಹತ್ತಿರ ಹೋಗಿ ಅಕ್ರಮಕ್ಕೆ ಕಡಿವಾಣ ಹಾಕದೇ ಹೋದಲ್ಲಿ ರೈತಸಂಘದ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ತಿಪ್ಪೇಸ್ವಾಮಿ ಅವರು ಎಚ್ಚರಿಸಿದ್ದಾರೆ.