‘ಬಸವಣ್ಣ ಸನ್ಯಾಸಿಯೂ ಅಲ್ಲ, ಸ್ವಾಮಿಯೂ ಅಲ್ಲ. ಅವರನ್ನು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ‘ಗೃಹಸ್ಥ ಜಗದ್ಗುರು’ ಎಂದು ಗೌರವಿಸಿದ್ದಾರೆ. ಹಾಗಂತ ಬಸವಣ್ಣನವರು ಒಂದು ಮಠದ ಜಗದ್ಗುರುಗಳೇ ಎಂದರೆ ಅಲ್ಲ. ಅವರಿಗೆ ನೀಲಾಂಬಿಕೆ, ಗಂಗಾಂಬಿಕೆ ಎನ್ನುವ ಪತ್ನಿಯರಿದ್ದರು. ಅಂಥವರು ಜಗದ್ಗುರು ಆಗಲು ಹೇಗೆ ಸಾಧ್ಯ? ಜಗದ್ಗುರು ಎಂದರೆ ಜಗತ್ತಿನ ನೋವು, ನಲಿವುಗಳನ್ನು ಅರಿತು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಎಲ್ಲ ಜನರ ಸಂಕಷ್ಟಗಳಿಗೆ ಪರಿಹಾರ ನೀಡಿ, ಅವರನ್ನು ಬೆಳಕಿನ ಕಡೆಗೆ ಕರೆದುಕೊಂಡು ಹೋಗುವ ಶುದ್ಧ ಮನಸ್ಸಿರುವವರು’ ಎಂದು
ತಿಳಿಸಿದರು.