ಪ್ರಕರಣದ ವಿವರ: ಸಿರಿಗೆರೆಯ ರುದ್ರಮ್ಮ ಜಯಪ್ಪ ಅವರ ಕುರಿಗಳನ್ನು ರಾಮಜ್ಜ ದಿನಗೂಲಿ ಆಧಾರದಲ್ಲಿ ಕಾಯುತ್ತಿದ್ದರು. ಏ.10ರಂದು ಕುರಿ ಕಾಯಲು ಹೋಗಿದ್ದರು. ಆದರೆ, ಸಂಜೆ ಎಷ್ಟು ಹೊತ್ತಾದರೂ ರಾಮಜ್ಜ ಬರಲಿಲ್ಲ. ಕುರಿಗಳು ಮಾತ್ರ ಮರಳಿದ್ದು, ಅದರಲ್ಲಿ 5 ಕುರಿಗಳು ಕಾಣೆಯಾಗಿದ್ದವು. ರಾಮಜ್ಜ ಹಾಗೂ ಕುರಿಗಳ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.