<p><strong>ಭರಮಸಾಗರ</strong>: ಹೋಬಳಿಯ ಸಿರಿಗೆರೆ–ಹೊಸರಂಗಾಪುರ ಬಳಿಯ ಗೋಮಾಳದ ಸಮೀಪ ಗಂಗಾಧರಪ್ಪ ಎಂಬುವವರ ಅಡಿಕೆ ತೋಟದಲ್ಲಿ ಕುರಿಗಾಹಿಯೊಬ್ಬರನ್ನುದುಷ್ಕರ್ಮಿಗಳು ಕೊಲೆ ಮಾಡಿ ಐದು ಕುರಿಗಳನ್ನು ಕಳವು ಮಾಡಿದ್ದು, ನಾಲ್ಕು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.</p>.<p>ರಾಮಜ್ಜ (60) ಕೊಲೆಯಾದವರು. ಅವರನ್ನು ಕೊಲೆ ಮಾಡಿ ದೇಹವನ್ನು ಅಡಿಕೆ ಗರಿಗಳಿಂದ ಮುಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಬುಧವಾರ ತೋಟದ ಕಾರ್ಮಿಕ ನೋಡಿದಾಗ ಅಡಿಕೆ ಗರಿಗಳ ಒಳಗೆರಾಮಜ್ಜ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.</p>.<p class="Subhead"><strong>ಪ್ರಕರಣದ ವಿವರ</strong>: ಸಿರಿಗೆರೆಯ ರುದ್ರಮ್ಮ ಜಯಪ್ಪ ಅವರ ಕುರಿಗಳನ್ನು ರಾಮಜ್ಜ ದಿನಗೂಲಿ ಆಧಾರದಲ್ಲಿ ಕಾಯುತ್ತಿದ್ದರು. ಏ.10ರಂದು ಕುರಿ ಕಾಯಲು ಹೋಗಿದ್ದರು. ಆದರೆ, ಸಂಜೆ ಎಷ್ಟು ಹೊತ್ತಾದರೂ ರಾಮಜ್ಜ ಬರಲಿಲ್ಲ. ಕುರಿಗಳು ಮಾತ್ರ ಮರಳಿದ್ದು, ಅದರಲ್ಲಿ 5 ಕುರಿಗಳು ಕಾಣೆಯಾಗಿದ್ದವು. ರಾಮಜ್ಜ ಹಾಗೂ ಕುರಿಗಳ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.</p>.<p>ಬುಧವಾರ ಬೆಳಿಗ್ಗೆ ತೋಟದ ಬಳಿಕೊಳೆತ ವಾಸನೆ ಬರುತ್ತಿದ್ದನ್ನು ಗಮನಿಸಿದ ಕಾರ್ಮಿಕ ಚಂದ್ರಪ್ಪ ಅಡಿಕೆ ಗರಿಗಳನ್ನು ತೆಗೆದಾಗ ಶವ ಪತ್ತೆಯಾಗಿದೆ.</p>.<p>‘ಕುರಿಗಳನ್ನು ಕದ್ದಿರುವ ದುಷ್ಕರ್ಮಿಗಳೇ ಕೊಲೆ ಮಾಡಿರಬಹುದು’ ಎಂದು ರುದ್ರಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭರಮಸಾಗರ</strong>: ಹೋಬಳಿಯ ಸಿರಿಗೆರೆ–ಹೊಸರಂಗಾಪುರ ಬಳಿಯ ಗೋಮಾಳದ ಸಮೀಪ ಗಂಗಾಧರಪ್ಪ ಎಂಬುವವರ ಅಡಿಕೆ ತೋಟದಲ್ಲಿ ಕುರಿಗಾಹಿಯೊಬ್ಬರನ್ನುದುಷ್ಕರ್ಮಿಗಳು ಕೊಲೆ ಮಾಡಿ ಐದು ಕುರಿಗಳನ್ನು ಕಳವು ಮಾಡಿದ್ದು, ನಾಲ್ಕು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.</p>.<p>ರಾಮಜ್ಜ (60) ಕೊಲೆಯಾದವರು. ಅವರನ್ನು ಕೊಲೆ ಮಾಡಿ ದೇಹವನ್ನು ಅಡಿಕೆ ಗರಿಗಳಿಂದ ಮುಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಬುಧವಾರ ತೋಟದ ಕಾರ್ಮಿಕ ನೋಡಿದಾಗ ಅಡಿಕೆ ಗರಿಗಳ ಒಳಗೆರಾಮಜ್ಜ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.</p>.<p class="Subhead"><strong>ಪ್ರಕರಣದ ವಿವರ</strong>: ಸಿರಿಗೆರೆಯ ರುದ್ರಮ್ಮ ಜಯಪ್ಪ ಅವರ ಕುರಿಗಳನ್ನು ರಾಮಜ್ಜ ದಿನಗೂಲಿ ಆಧಾರದಲ್ಲಿ ಕಾಯುತ್ತಿದ್ದರು. ಏ.10ರಂದು ಕುರಿ ಕಾಯಲು ಹೋಗಿದ್ದರು. ಆದರೆ, ಸಂಜೆ ಎಷ್ಟು ಹೊತ್ತಾದರೂ ರಾಮಜ್ಜ ಬರಲಿಲ್ಲ. ಕುರಿಗಳು ಮಾತ್ರ ಮರಳಿದ್ದು, ಅದರಲ್ಲಿ 5 ಕುರಿಗಳು ಕಾಣೆಯಾಗಿದ್ದವು. ರಾಮಜ್ಜ ಹಾಗೂ ಕುರಿಗಳ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.</p>.<p>ಬುಧವಾರ ಬೆಳಿಗ್ಗೆ ತೋಟದ ಬಳಿಕೊಳೆತ ವಾಸನೆ ಬರುತ್ತಿದ್ದನ್ನು ಗಮನಿಸಿದ ಕಾರ್ಮಿಕ ಚಂದ್ರಪ್ಪ ಅಡಿಕೆ ಗರಿಗಳನ್ನು ತೆಗೆದಾಗ ಶವ ಪತ್ತೆಯಾಗಿದೆ.</p>.<p>‘ಕುರಿಗಳನ್ನು ಕದ್ದಿರುವ ದುಷ್ಕರ್ಮಿಗಳೇ ಕೊಲೆ ಮಾಡಿರಬಹುದು’ ಎಂದು ರುದ್ರಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>