ವಿವಾಹದ ದಿನಾಂಕ ನಿಗದಿಯಾದ ಬಳಿಕ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚಲಾಗಿತ್ತು. ಕಲ್ಯಾಣ ಮಂಟಪ ಕೂಡ ಗೊತ್ತು ಮಾಡಲಾಗಿತ್ತು. ಆದರೆ, ಕೊರೊನಾ ಸೋಂಕಿನಿಂದ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿತು. ಕಲ್ಯಾಣ ಮಂಟಪ, ದೇಗುಲ ಎಲ್ಲವೂ ಮುಚ್ಚಿದವು. ನಿಗದಿಯಾದ ವಿವಾಹ ನಿಲ್ಲಿಸಬಾರದು ಎಂಬ ಕಾರಣಕ್ಕೆ ಸರಳವಾಗಿ ನಡೆಸಲು ಪೋಷಕರು ನಿರ್ಧರಿಸಿ ಅಧಿಕಾರಿಗಳಿಂದ ಅನುಮತಿ ಪಡೆದದಿದ್ದರು.