ಗುರುತಿಪ್ಪೇರುದ್ರಸ್ವಾಮಿ ದೇವಾಲಯವು ಜಿಲ್ಲೆಯ ಪ್ರಮುಖ ಆರಾಧನಾ ಕೇಂದ್ರ. ನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೀಪಾವಳಿ ಪ್ರಯುಕ್ತ ಸೋಮವಾರ ಪಟ್ಟಣದ ಹೊರಮಠ ಮತ್ತು ಒಳಮಠಗಳೆರಡಲ್ಲೂ ಭಕ್ತರ ದಂಡೇ ಸೇರಿತ್ತು. ಆದರೆ ಮಂಗಳವಾರ ಕೇತುಗ್ರಸ್ಥ ಸೂರ್ಯಗ್ರಹಣದ ನಿಮಿತ್ತ ಗುರುತಿಪ್ಪೇರುದ್ರಸ್ವಾಮಿ ದೇವಾಲಯಗಳ ಹೊರಮಠ ಮತ್ತು ಒಳಮಠಗಳನ್ನು ಮುಚ್ಚಬೇಕು ಎಂದು ಸರ್ಕಾರವೇ ಆದೇಶ ಹೊರಡಿಸಿದೆ. ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನ ಸೇರಿದಂತೆ ಪಟ್ಟಣದಲ್ಲಿರುವ
ವಿಜಯ ವೀರಭದ್ರಸ್ವಾಮಿ, ಆಂಜನೇಯಸ್ವಾಮಿ, ಈಶ್ವರ ದೇವಾಲಯ, ಶಾಂತಲಿಂಗೇಶ್ವರ ದೇವಾಳಯ, ಗಣೇಶ ದೇವಾಲಯಗಳು ಬಾಗಿಲು ಮುಚ್ಚಿದ್ದವು.