ಮ್ಯಾಸನಾಯಕ ಸಮುದಾಯದ ಜನರು ಈ ಆಚರಣೆಯನ್ನು ತಲೆ ತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಶಿವರಾತ್ರಿ ಜಾಗರಣೆ ನಡೆದ ಮರುದಿನ ಭೈರಲಿಂಗೇಶ್ವರ, ಬೊಮ್ಮಲಿಂಗೇಶ್ವರ ಹಾಗೂ ಅಹೋಬಲ ನರಸಿಂಹಸ್ವಾಮಿಯ ಜಾತ್ರೆ ನಡೆಯುತ್ತದೆ. ಆಸೆ, ಆಕಾಂಕ್ಷೆಯನ್ನು ಈಡೇರಿಸಿದ ದೇವರಿಗೆ ಮುಳ್ಳಿನ ಮೇಲೆ ಉರುಳಾಡುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ.