‘ಜಿಲ್ಲೆಯ ತಳಕು ಗ್ರಾಮದಲ್ಲಿ ತರಾಸು ಕುಟುಂಬುವು ಜೀವಿಸಿದೆ ಎಂಬುದೇ ನಮ್ಮಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ. ಕನ್ನಡದ ಶ್ರೇಷ್ಠ ರಾಷ್ಟ್ರಕವಿ ಕುವೆಂಪು ಅವರಿಗೆ ಗುರುಗಳಾಗಿದ್ದ ಟಿ.ಎಸ್. ವೆಂಕಣ್ಣಯ್ಯ, ಕಾದಂಬರಿ ಕ್ಷೇತ್ರಕ್ಕೆ ಅಮೋಘ ಸಾಹಿತ್ಯದ ಕೊಡುಗೆ ನೀಡಿರುವ ತರಾಸು, ಹಾಗೂ ಸಾಹಿತ್ಯ ಚರಿತ್ರೆಯನ್ನು ಸಮರ್ಥವಾಗಿ ಕಟ್ಟಿಕೊಟ್ಟಿರುವ ತ.ಸು. ಶಾಮರಾಯರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಶ್ವಿನಿ ದೇವತೆಗಳಂತೆ ಮಿನುಗಿದ್ದಾರೆ. ಇಂತಹ ಮಹಾನ್ ಸಾಹಿತಿಗಳ ಪುತ್ಥಳಿಗಳನ್ನು ಅವರ ಹುಟ್ಟೂರಿನಲ್ಲಿ ನಿರ್ಮಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿತ್ತು. ಇದನ್ನು ಮನಗಂಡು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹ 15ಲಕ್ಷ ವೆಚ್ಚದಲ್ಲಿ ಶಿಲೆಯ ಕಟ್ಟಡ ಮತ್ತು ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ತಳಕು ಸೇರಿದಂತೆ ಈ ಭಾಗದ ಜನರು ಈ ಮೂರು ಜನ ಸಾಹಿತಿಗಳ ಸಾಹಿತ್ಯ ಸೇವೆಯನ್ನು ನಿತ್ಯ ಸ್ಮರಿಸಬೇಕಿದೆ’ ಎಂದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ಬಿಜೆಪಿ ಮಂಡಲಾಧ್ಯಕ್ಷರಾದ ಪಿ.ಎಂ. ಮಂಜುನಾಥ, ಈ. ರಾಮರೆಡ್ಡಿ, ಮುಖಂಡರಾದ ಜಯಪಾಲಯ್ಯ, ಪಾಪೇಶ್, ಮಲ್ಲೇಶ್, ಶಿವಪ್ರಕಾಶ್ರೆಡ್ಡಿ, ರೈತಮುಖಂಡ ಓಬಣ್ಣ
ಇದ್ದರು.