ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯತಮನ ಮನೆಯಲ್ಲಿ ವಿವಾಹಿತೆ ಆತ್ಮಹತ್ಯೆ

Last Updated 17 ಅಕ್ಟೋಬರ್ 2021, 16:29 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿವಾಹಿತ ಮಳೆಯೊಬ್ಬರು ಪ್ರಿಯತಮನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲಾಪುರದಲ್ಲಿ ಭಾನುವಾರ ನಡೆದಿದೆ.

ಮಲ್ಲಾಪುರದ ಲಕ್ಷ್ಮಿ (25) ಮೃತ ಮಹಿಳೆ. ಹೇಮಂತ್‌ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ತಾಯಿ ದೂರು ದಾಖಲಿಸಿದ್ದಾರೆ.

ಲಕ್ಷ್ಮಿ ಅವರು ಎಂಟು ವರ್ಷಗಳ ಹಿಂದೆ ಚಾಲಕರೊಬ್ಬರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ–‍ಪತ್ನಿ ನಡುವೆ ಗಲಾಟೆ ಉಂಟಾಗಿ ವರ್ಷದ ಹಿಂದಿನಿಂದ ಪ್ರತ್ಯೇಕವಾಗಿದ್ದರು. ಈ ನಡುವೆ ಲಕ್ಷ್ಮಿ ಅವರು ಹೇಮಂತ್‌ ಎಂಬುವರೊಂದಿಗೆ ನೆಲೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಹೇಮಂತ್‌ ಹಾಗೂ ಲಕ್ಷ್ಮಿ ನಡುವೆ ಕಲಹ ಉಂಟಾಗಿದೆ. ಶೀಲ ಶಂಕಿಸಿದ ಪ್ರಿಯಕರನೊಂದಿಗೆ ಮಹಿಳೆ ಗಲಾಟೆ ಮಾಡಿಕೊಂಡಿದ್ದರು. ತವರು ಮನೆಯಲ್ಲಿ ದಸರಾ ಹಬ್ಬ ಮುಗಿಸಿ ಅ.16ರಂದು ಮರಳಿದ ಮಹಿಳೆ, ಸೀರೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT